ADVERTISEMENT

ಕಲಾವಿದರನ್ನು ಗೌರವಿಸುವ ಪರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ವಿವಿಧ ಪ್ರಶಸ್ತಿಗಳ  ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸದಾನಂದಗೌಡರು `ನಾವು ರಾಜ್ಯ ಆಳುವವರು;ಪ್ರಶಸ್ತಿ ಪಡೆದ ಈ ಕಲಾವಿದರು ರಾಜ್ಯದ ಜನತೆಯ ಮನಸ್ಸನ್ನು ನಿಜ ಅರ್ಥದಲ್ಲಿ ಆಳುವವರು~ ಎಂದು ಹೇಳುವ ಮೂಲಕ ಉದಾತ್ತ ಆದರ್ಶ ಮೆರೆದಿದ್ದಾರೆ (ಪ್ರವಾ. ಫೆ.22).

ವರದಿಯ ಜೊತೆಗೆ ಪ್ರಕಟವಾಗಿರುವ ಸಮಾರಂಭದ ಚಿತ್ರದಲ್ಲಿ ಜನಮಾನಸವನ್ನು ಆಳುತ್ತಿರುವ ವಯೋವೃದ್ಧ ಗೌರವಾನ್ವಿತ ಕಲಾವಿದರನ್ನೆಲ್ಲ ಹಿಂದೆ ನಿಲ್ಲಿಸಿಕೊಂಡು, ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಕುರ್ಚಿಗಳಲ್ಲಿ ಕುಳಿತಿರುವುದನ್ನು ನೋಡಿದರೆ ರಾಜಕಾರಣಿಗಳು ಆಡುವ ಮಾತಿಗೂ ನಡವಳಿಕೆಗೂ ಇರುವ ವ್ಯತ್ಯಾಸ ಎಷ್ಟು ಎಂಬುದು ಗೊತ್ತಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.