ADVERTISEMENT

ಶ್ಯಾಮಲೆಯ ಕಾಲು...

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

`ನನ್ನ ಕಾಲು
ನೆಲದ ಮೇಲೆ ಇರುವಂತೆ
ನೋಡಿಕೊಳ್ಳುತ್ತೇನೆ~
(ಪ್ರ ವಾ ಸೆ.13);
ಅಂಗೋಲಾದ ಕಪ್ಪುಸುಂದರಿ
ಉಲಿದಿದ್ದಾಳೆ ಆನಂದಬಾಷ್ಪದ     ನಡುವೆ;
ಹಾರೈಸೋಣ ಹಾಗೇಯೇ
ಆಗಲಿ ಎಂದು
ವಿಶ್ವಸುಂದರಿಯೆಂದು    ಎದೆ ಉಬ್ಬಿಸಿಕೊಂಡು
ಇಡದಿರಲಿ ಆಕೆ ಯಾರ ತಲೆಯ
ಮೇಲೂ ತನ್ನ ಕಾಲನ್ನ;
ಧರೆಯ ಮೇಲಿನ ಚೆಂದುಳ್ಳಿ ಶ್ಯಾಮಲೆಗೆ
ಬಾರದಿರಲಿ ಬೆಡಗು ಬಿನ್ನಾಣ
ಮುಪ್ಪು ಕಾಡುವ ಮುನ್ನ...!
-ಎಲ್.ಎಚ್.ಅರುಣಕುಮಾರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.