ADVERTISEMENT

ಸ್ಟುಡಿಯೊ ಸ್ಮಶಾನ ಆಗದಿರಲಿ

ಬಿಲ್ಲೇಶ್ವರ ಅಚ್ಚು, ಹುಂಚ
Published 5 ಡಿಸೆಂಬರ್ 2018, 20:00 IST
Last Updated 5 ಡಿಸೆಂಬರ್ 2018, 20:00 IST

ಅಂಬರೀಷ್‌ ನಿಧನದ ಬೆನ್ನಿಗೇ ವಿಷ್ಣುವರ್ಧನ್ ಸ್ಮಾರಕದ ಕುರಿತು ವಿವಾದ ಭುಗಿಲೆದ್ದಿದೆ. ನೆನಪು, ಅಭಿಮಾನ ಹೃದಯದಲ್ಲಿರ
ಬೇಕೇ ಹೊರತು ಸ್ಥಾವರ ರೂಪದಲ್ಲಿ ಅಲ್ಲ. ಸ್ಮಾರಕ ನಿರ್ಮಾಣ ಮಾಡುವುದರಿಂದ ಅನುಕೂಲಕ್ಕಿಂತ ಅನನುಕೂಲಗಳೇ ಹೆಚ್ಚು. ಅವುಗಳ ನಿರ್ವಹಣೆ, ರಕ್ಷಣೆ ತುಂಬಾ ಸೂಕ್ಷ್ಮ ವಿಚಾರ. ಬಸವಣ್ಣನವರ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಸೂತ್ರವನ್ನು ಪಾಲಿಸಿದರೆ ಉತ್ತಮ. ಅಲ್ಲದೆ ಸ್ಟುಡಿಯೊಗಳನ್ನು ಸ್ಮಶಾನಗಳನ್ನಾಗಿ ಪರಿವರ್ತಿಸುವುದು ತರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.