ADVERTISEMENT

ಸಿರಿವಂತರಿಗೆ ಅನ್ವಯಿಸದು!

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:01 IST
Last Updated 22 ಜನವರಿ 2020, 20:01 IST

ಬೆಂಗಳೂರಿನ ಬೆಳ್ಳಂದೂರು ಹಾಗೂ ಕರಿಯಮ್ಮನ ಅಗ್ರಹಾರ ಪ್ರದೇಶಗಳಲ್ಲಿ ಬಡವರು ಕಟ್ಟಿಕೊಂಡಿದ್ದ ಜೋಪಡಿಗಳನ್ನು ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ನೆಲಸಮಗೊಳಿಸಿದ ವರದಿಯನ್ನು(ಪ್ರ.ವಾ., ಜ. 21) ಓದಿ ಮನಸ್ಸಿಗೆ ತುಂಬಾ ನೋವಾಯಿತು. ಕೇವಲ ಬಡವರಿಗೆ ಕಾನೂನು ಅನ್ವಯಿಸುತ್ತದೆ.

ವಿಪರ್ಯಾಸವೆಂದರೆ, ಸಿರಿವಂತರ ಸನಿಹಕ್ಕೂ ಅದು ತೆರಳುವುದಿಲ್ಲ. ಒಂದು ವೇಳೆ ತೆರಳಿದರೂ ಅದರಲ್ಲಿ ರಾಜಕೀಯ ದ್ವೇಷ ಅಡಗಿರುತ್ತದೆ. ಇಂತಹ ಸ್ಥಿತಿಯಲ್ಲಿ, ಈ ಸಂತ್ರಸ್ತರಿಗೆ ವಾಸಿಸಲು ಸೂಕ್ತ ಸ್ಥಳ ಸಿಗುವವರೆಗೂ ಮಾಧ್ಯಮಗಳು ಈ ವಿಷಯವನ್ನು ಬಿಡಬಾರದು. ಬಡವರ ಧ್ವನಿಯಾಗಿ ಅವು ಕೆಲಸ ಮಾಡಬೇಕು.

-ರಾಧಿಕಾ ಹರ್ಲಾಪುರ್,ಹುಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.