ಇದುವರೆಗೂ ಬ್ಯಾಂಕುಗಳು ಗ್ರಾಹಕರ ಬಗ್ಗೆ ಮಾಹಿತಿ (Know Your Customer- ಕೆವೈಸಿ) ಪಡೆದುಕೊಳ್ಳುತ್ತಿದ್ದವು. ಆದರೆ, ಈಗ ನಮ್ಮ ಸರದಿ. ಏಕೆಂದರೆ, ಗ್ರಾಹಕರಾದ ನಾವು ಬ್ಯಾಂಕಿನ ಇತಿಹಾಸ, ಭವಿಷ್ಯ ಮುಂತಾದ ಮಾಹಿತಿಯನ್ನು ಪಡೆದುಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ. ಈಗ ನಾವು ಇಂತಹ ಸೌಲಭ್ಯಕ್ಕಾಗಿ (Know Your Bank– ಕೆವೈಬಿ) ಆಗ್ರಹಿಸಬೇಕಾಗಿದೆ.
ಬ್ಯಾಂಕ್ಗಳು ಯಾರಿಗೆ ನಮ್ಮ ಹಣವನ್ನು ಸಾಲವಾಗಿ ಕೊಡುತ್ತವೆ, ಆ ಹಣ ವಸೂಲಾಗುತ್ತಿದೆಯೇ? ಯಾರು ಹಣ ವಾಪಸ್ ಕೊಡುತ್ತಿಲ್ಲ ಎಂಬಂತಹ ಮಾಹಿತಿಯನ್ನು ನಮಗೆ ಅವು ತಿಳಿಸುವುದು ಅಗತ್ಯ. ಆರ್ಬಿಐ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬ್ಯಾಂಕಿನಲ್ಲಿ ಎಲ್ಲರಿಗೂ ಕಾಣುವಂತೆ ಇಂತಹ ಮಾಹಿತಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು.
-ವಿ.ವಿಜಯೇಂದ್ರ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.