ತಮ್ಮ ಸಮುದಾಯದ ಹಿಂದುಳಿದವರ ಬಗ್ಗೆ ಅತೀವ ಕಾಳಜಿಯಿಂದ ಮೈಕೊಡವಿಕೊಂಡು ಎದ್ದು ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಆಯಾ ಸಮುದಾಯದ ನೇತಾರರಿಗೆ ಅಭಿನಂದನೆಗಳು.
ಸರ್ಕಾರಕ್ಕೆ ಮೀಸಲಾತಿಗಾಗಿ ಗಡುವು ನೀಡುವ ಮುನ್ನ ತಮ್ಮ ಸಮುದಾಯದವರ ಒಂದು ಸಮಿತಿ ರಚಿಸಿ, ಅದರ ಮೂಲಕ ಆರ್ಥಿಕ ಸಮೀಕ್ಷೆ ಮಾಡಿಸಲಿ.
ಸಮುದಾಯದ ಉಳ್ಳವರು ತಮ್ಮಲ್ಲಿರುವ ಸಂಪತ್ತಿನ ಸ್ವಲ್ಪ ಭಾಗವನ್ನು ಆ ಸಮುದಾಯದ ಹಿಂದುಳಿದವ
ರೊಂದಿಗೆ ಹಂಚಿಕೊಳ್ಳಲಿ. ಈ ಕಾರ್ಯಕ್ಕೆ ನೇತಾರರು ಉಳ್ಳವರ ಮನವೊಲಿಸಲಿ. ಆ ನಂತರವೂ ಸಮುದಾಯದವರು ಹಿಂದುಳಿದರೆ ಮೀಸಲಾತಿಗಾಗಿ ಹೋರಾಡಲಿ.
ಮಲ್ಲಿಕಾರ್ಜುನ, ಸುರಧೇನುಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.