ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ (1952) ಚುನಾವಣೆ ಘೋಷಣೆಯಾದಾಗ ಈ ಭಾಗದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಜವಾಹರಲಾಲ್ ನೆಹರೂ ಅವರು ಉತ್ತರ ಪ್ರದೇಶದ ಶೌಕತ್ಉಲ್ಲಾ ಶಾಹ ಅನ್ಸಾರಿ ಎಂಬುವವರನ್ನು ಇಲ್ಲಿ ಕಣಕ್ಕಿಳಿಸಿದ್ದರು ಎನ್ನುವ ವರದಿ (ಪ್ರ.ವಾ. ಏ.12) ಓದಿದೆ. ಅಂದರೆ, ರಾಜಕೀಯ ಪಕ್ಷಗಳು ಜಾತಿ ಮತದ ಆಧಾರದ ಮೇಲೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರಿಪಾಟಕ್ಕೆ ದೇಶದ ಮೊದಲ ಮಹಾ ಚುನಾವಣೆಯಲ್ಲಿಯೇ ಬುನಾದಿ ಹಾಕಲಾಗಿತ್ತೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.