ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ಇತ್ತೀಚೆಗೆ ಮೆರವಣಿಗೆ ಹೊರಟಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಯುವಕನೊಬ್ಬ ಪೊಲೀಸರ ಮುಂದೆಯೇ ಗುಂಡು ಹಾರಿಸಿ, ವಿದ್ಯಾರ್ಥಿಯೊಬ್ಬನನ್ನು ಗಾಯಗೊಳಿಸಿದ ಸುದ್ದಿ (ಪ್ರ.ವಾ., ಜ. 31) ಓದಿ ಆಘಾತವಾಯಿತು. ಇದಕ್ಕೆ ಪ್ರಭುತ್ವದ ಕುಮ್ಮಕ್ಕಿದೆಯೇ ಎನ್ನುವ ಅನುಮಾನ ಕಾಡಿತು. ‘ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಸಂದೇಶದೊಂದಿಗೆ ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿದ ಆತನ ಮನಃಸ್ಥಿತಿಯು ಗಾಂಧೀಜಿಯ ಅಹಿಂಸಾ ತತ್ವವನ್ನು ಅಣಕಿಸುವಂತಿದೆ.
ಯುವಜನರ ದಾರಿ ತಪ್ಪಿಸಿ ಪಕ್ಷಪ್ರೇಮ, ಕೋಮು ದ್ವೇಷವನ್ನು ಅವರಲ್ಲಿ ತುಂಬಿಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಸಮಯ ಕೈ ಮೀರುವುದಕ್ಕೂ ಮುನ್ನ ಎಚ್ಚೆತ್ತು ಈಗಿನ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಗಿದೆ. ಪೊಲೀಸ್ ಇಲಾಖೆಗೆ ಈ ಶಕ್ತಿ ಇದೆ. ಆದರೆ ಅದು ಬೆದರಿಕೆ ಅಥವಾ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಿದರೆ ಮಾತ್ರ ಇದು ಸಾಧ್ಯ.
- ಹರೀಶ್ ಕಮ್ಮನಕೋಟೆ,ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.