ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ನಿವೃತ್ತ ಅಧಿಕಾರಿಯೊಬ್ಬರ ಮಗ ಬೆಂಗಳೂರಿನಲ್ಲಿ ತನ್ನ ತಂದೆಯನ್ನೇ ಕೊಂದು ವಿಕೃತ ಮೆರೆದಿದ್ದಾನೆ (ಪ್ರ.ವಾ., ಡಿ. 31). ತಂದೆ ತಾನು ದುಡಿದದ್ದನ್ನು ಯಾರಿಗೋ ಕೊಡುವರೆಂಬ ಕಾರಣಕ್ಕೆ ಅವರನ್ನೇ ಕೊಲ್ಲಲು ಮುಂದಾದದ್ದು ಅವನ ದುಡಿಯಲಾರದ ಸೋಮಾರಿತನದ ಗುಣ ಮತ್ತು ಆತ್ಮಸ್ಥೈರ್ಯವಿಲ್ಲದ ಹೇಡಿತನದ ಸಂಕೇತವಾಗಿದೆ. ಹೊತ್ತು ಸಾಕಿ ಬೆಳೆಸಿದವರನ್ನು ತಮ್ಮ ಕೈಯ್ಯಾರೆ ಕೊಲ್ಲುವ ಇಂತಹ ಯುವಕರು ಹೇಗೆ ದೇಶದ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ?
-ವಿಶಾಲಾ ಆರಾಧ್ಯ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.