ADVERTISEMENT

ಯುವಕನ ಕೃತ್ಯ ಹೇಡಿತನದ ಸಂಕೇತ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಿವೃತ್ತ ಅಧಿಕಾರಿಯೊಬ್ಬರ ಮಗ ಬೆಂಗಳೂರಿನಲ್ಲಿ ತನ್ನ ತಂದೆಯನ್ನೇ ಕೊಂದು ವಿಕೃತ ಮೆರೆದಿದ್ದಾನೆ (ಪ್ರ.ವಾ., ಡಿ. 31). ತಂದೆ ತಾನು ದುಡಿದದ್ದನ್ನು ಯಾರಿಗೋ ಕೊಡುವರೆಂಬ ಕಾರಣಕ್ಕೆ ಅವರನ್ನೇ ಕೊಲ್ಲಲು ಮುಂದಾದದ್ದು ಅವನ ದುಡಿಯಲಾರದ ಸೋಮಾರಿತನದ ಗುಣ ಮತ್ತು ಆತ್ಮಸ್ಥೈರ್ಯವಿಲ್ಲದ ಹೇಡಿತನದ ಸಂಕೇತವಾಗಿದೆ. ಹೊತ್ತು ಸಾಕಿ ಬೆಳೆಸಿದವರನ್ನು ತಮ್ಮ ಕೈಯ್ಯಾರೆ ಕೊಲ್ಲುವ ಇಂತಹ ಯುವಕರು ಹೇಗೆ ದೇಶದ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ?

-ವಿಶಾಲಾ ಆರಾಧ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT