ಕೊರೊನಾ ಸೋಂಕಿಗೊಳಗಾಗಿ ಚಿತ್ರದುರ್ಗದ ಕೋವಿಡ್–19 ಆಸ್ಪತ್ರೆಗೆ ದಾಖಲಾಗಿದ್ದ 110 ವರ್ಷದ ಅಜ್ಜಿ ಸಿದ್ಧಮ್ಮ ಗುಣಮುಖರಾಗಿ ಮನೆಗೆ ಮರಳಿದ್ದಾರೆ (ಪ್ರ.ವಾ., ಆ. 2). ಈ ಸುದ್ದಿಯು ಹಿರಿಯ ನಾಗರಿಕರಿಗೆ ಅತ್ಯಂತ ಸಂತಸವನ್ನು ಉಂಟುಮಾಡಿದೆ. ಹಿರಿಯ ನಾಗರಿಕರು ಮನೆಯ ಒಳಗೇ ಇರಬೇಕು ಎಂಬ ಎಚ್ಚರಿಕೆಯನ್ನು ಕೇಳಿಕೇಳಿ ಸಾಕಾಗಿದ್ದವರಿಗೆ ದೂರದಲ್ಲೊಂದು ಮರೀಚಿಕೆ ಕಂಡಂತೆ ಈ ಸುದ್ದಿ ಭಾಸವಾಗುತ್ತದೆ.
ಕೊರೊನಾ ಕುರಿತು ಮಾಧ್ಯಮಗಳಲ್ಲಿ ಆತಂಕಕಾರಿ ಸುದ್ದಿಗಳು ಪ್ರಕಟವಾಗುತ್ತಿರುವುದರ ನಡುವೆ ಇಂತಹ ಸುದ್ದಿಗಳು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಜೊತೆಗೆ ಬದುಕು ಇನ್ನೂ ಇದೆ ಎಂಬ ಭಾವವನ್ನು ಮೂಡಿಸುತ್ತವೆ. ಇಂತಹ ಸುದ್ದಿಗಳು ಹೆಚ್ಚುಹೆಚ್ಚು ಪ್ರಕಟವಾಗಲಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.