
ಪ್ರಜಾವಾಣಿ ವಾರ್ತೆರೈತರು ಅನ್ನದಾತರು ನಿಜ. ಅವರ ಕಷ್ಟ–ನಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅಂದಹಾಗೆ ಬ್ಯಾಂಕಿನ ಅಧಿಕಾರಿ ವರ್ಗ ಹಾಗೂ ನೌಕರ ವರ್ಗದಲ್ಲೂ ರೈತ ಕುಟುಂಬದವರಿದ್ದಾರೆ. ಅವರಿಗೂ ರೈತರ ಬಗ್ಗೆ ಕಾಳಜಿ ಇದೆ. ಇಂತಹ ಸಂದರ್ಭದಲ್ಲಿ, ‘...ಬ್ಯಾಂಕಿನ ಅಧಿಕಾರಿಗಳನ್ನು ಜೈಲಿಗೆ ಕಳಿಸುತ್ತೇನೆ’ ಎಂಬ ಮುಖ್ಯಮಂತ್ರಿ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಇದೊಂದು ನಗೆಪಾಟಲು ಧಮ್ಕಿ.
ಏಕೆಂದರೆ ಬ್ಯಾಂಕಿನ ಒಬ್ಬ ಮಾಮೂಲಿ ಜವಾನ ಕೂಡ ಮುಖ್ಯಮಂತ್ರಿ ಅಧೀನಕ್ಕೆ ಒಳಪಡುವುದಿಲ್ಲ. ಬದಲಾಗಿ ಅವರಿಗೆ ಡಿ.ಜಿ.ಎಂ., ಜಿ.ಎಂ., ಎಂ.ಡಿ. ಇದ್ದಾರೆ. ಇವರೆಲ್ಲಾ ಆರ್.ಬಿ.ಐ. ಅಧೀನಕ್ಕೆ ಒಳಪಡುತ್ತಾರೆ. ಮುಖ್ಯಮಂತ್ರಿಯವರು ಧಮ್ಕಿ ಹಾಕುವ ಬದಲು ಎಲ್ಲಾ ಬ್ಯಾಂಕುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಲ ಮನ್ನಾ ಕೆಲಸ ಸುಗಮವಾಗಿ ಆಗುವಂತೆ ಮಾಡುವುದು ಒಳ್ಳೆಯದು.
ಎನ್. ಮೂರ್ತಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.