ADVERTISEMENT

ಕೊರೊನಾ ಸೋಂಕಿತರನ್ನು ಅವಮಾನಿಸದಿರಿ

​ಪ್ರಜಾವಾಣಿ ವಾರ್ತೆ
Published 12 ಮೇ 2021, 19:31 IST
Last Updated 12 ಮೇ 2021, 19:31 IST

ಕೊರೊನಾ ಸೋಂಕು ಯಾವ ಹೊತ್ತಿನಲ್ಲಿ ಯಾರ ಮನೆ ಬಾಗಿಲ ಬಳಿ ಬರುತ್ತದೋ ಗೊತ್ತಿಲ್ಲ. ಆದರೆ ಅದು ಬೀದಿಗಳನ್ನು, ಮನೆಗಳನ್ನು, ಕೋಣೆಗಳನ್ನು ಬದಲಿಸುವಷ್ಟರ ಮಟ್ಟಿಗೆ ಸಂಬಂಧಿಕರು, ನೆರೆಹೊರೆಯವರು, ಗೆಳೆಯರು, ಪ್ರೀತಿಪಾತ್ರರ ನಡುವೆ ಅಂತರ ಸೃಷ್ಟಿಸುತ್ತಿದೆ. ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕಾಗಿ ಅವರ ಮನಸ್ಸು ಗಾಸಿಗೊಳಿಸುವಂತಹ ಕೆಲಸವನ್ನು ಯಾರೂ ಮಾಡಬೇಡಿ.

ಕೊರೊನಾ ಸೋಂಕಿತರು ಮೊದಲೇ ಭಯ, ಆತಂಕಕ್ಕೆ ಒಳಗಾಗಿರುತ್ತಾರೆ. ಅಂತಹವರನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು ಸರಿಯಲ್ಲ. ಅಗತ್ಯವಿರುವ ಮನೋಧೈರ್ಯವನ್ನು ಅವರಿಗೆ ನೀಡಿ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ, ಗೌರವ ಮತ್ತು ಪ್ರೀತಿಯಿಂದ ನೋಡಿಕೊಂಡರೆ ಅವರು ಶೀಘ್ರ ಗುಣಮುಖರಾಗಲು ಅನುವಾಗುತ್ತದೆ.

–ವಿದ್ಯಾಶ್ರೀ ಬಿ., ಬಳ್ಳಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.