ADVERTISEMENT

ಹೂವಿನ ಸುರಿಮಳೆ ಏಕೆ?

ಮಾರುತಿ ಬಿ.ಆರ್  ಬೆಂಗಳೂರು
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST

ಚುನಾವಣಾ ಪ್ರಚಾರದ ವೇಳೆಯಲ್ಲಿ, ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಜನನಾಯಕರು ಹಾಗೂ ಸಿನಿಮಾ ನಟರ ಮೇಲೆ ಅವರವರ ಬೆಂಬಲಿಗರು ದೊಡ್ಡ ವಾಹನದ ಮೇಲೆ ನಿಂತು ಹೂವಿನ ಮಳೆಗರೆಯುತ್ತಿದ್ದಾರೆ, ಬೃಹತ್‌ ಹೂವಿನ ಹಾರಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ.

ಈ ನೋಟ ದಿನನಿತ್ಯ ಟಿ.ವಿ. ವಾಹಿನಿಗಳಲ್ಲಿ ಕಂಡು ಬರುತ್ತಿದೆ. ಹೀಗೆ ಹೂವಿಗೆ ಇಷ್ಟೊಂದು ದುಡ್ಡು ಸುರಿಯುವುದರಿಂದ ಏನು ಪ್ರಯೋಜನ?

ಅಭ್ಯರ್ಥಿಗಳ ಬೆಂಬಲಿಗರು ಅದಕ್ಕೆ ಬಳಸುವ ಹಣವನ್ನು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ದನಕರುಗಳ ಮೇವು ಸಂಗ್ರಹಣೆಯಂತಹ ಕಾರ್ಯಗಳಿಗೆ ಬಳಸಬಹುದು. ಇಲ್ಲವೇ ಯಾವುದಾದರೂ ಅನಾಥಾಶ್ರಮಕ್ಕೆ ನೀಡಬಹುದು. ಇಪ್ಪತ್ತು ಗಿಡಗಳನ್ನಾದರೂ ನೆಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.