ADVERTISEMENT

ಕಾಡಂಚಿನ ಜನರ ಗೋಳು ಕೇಳುವವರು ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST

ರಾಜ್ಯದ ಕಾಡಂಚಿನ ಹಳ್ಳಿಗಳಲ್ಲಿ ಹುಲಿ,ಚಿರತೆ ಮತ್ತು ಆನೆಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಈ ಪ್ರಾಣಿಗಳಿಂದ ರಾಸುಹಾನಿ, ಜನರ ಪ್ರಾಣಹಾನಿ ಮತ್ತು ಬೆಳೆಹಾನಿ ನಿರಂತರವಾಗಿ ನಡೆಯುತ್ತಿದೆ. ರೈತಜೀವನ ಇಷ್ಟು ಹದಗೆಟ್ಟಿದ್ದನ್ನು ನಾಲ್ಕೈದು ದಶಕಗಳಲ್ಲಿ ನಾನು ಕಂಡಿದ್ದಿಲ್ಲ. ‘ಅರಣ್ಯನಾಶ ಹೆಚ್ಚು ಆಗಿರುವುದರಿಂದ ಹೀಗಾಗಿದೆ’ ಎಂದು ಪರಿಸರವಾದಿಗಳು ಹೇಳುತ್ತಾರೆ.

ಅಧಿಕಾರಸ್ಥರು ಏನೂ ಆಗಿಯೇ ಇಲ್ಲ ಎಂಬಂತೆ ತಮ್ಮ ರಾಜಕೀಯ ಮೇಲಾಟಗಳಲ್ಲಿ ಮುಳುಗಿದ್ದಾರೆ. ಜನರ ಬವಣೆಯತ್ತ ಅವರು ದೃಷ್ಟಿ
ಹರಿಸುತ್ತಲೇ ಇಲ್ಲ. ಇದು, ನೋವಿನ ಸಂಗತಿ.

ಕಾಡಂಚಿನ ಹಳ್ಳಿಗಳ ಜನ ಭಯದಲ್ಲಿ ಬದುಕು ಸವೆಸುತ್ತಿದ್ದಾರೆ. ಹಗಲಿನಲ್ಲಿ ಹೊಲ–ತೋಟಕ್ಕೆ ಹೋಗುವುದಕ್ಕೂ ಭಯ ಪಡಬೇಕಾಗಿದೆ. ಯಾವ ದಿಕ್ಕಿನಿಂದ ಏನು ವಕ್ಕರಿಸುತ್ತದೋ ಎಂಬ ಭೀತಿ ನೆರಳಿನಂತೆ ಹಿಂಬಾಲಿಸುತ್ತದೆ. ಅರಣ್ಯದ ಧಾರಣಾ ಶಕ್ತಿಯನ್ನು ವನ್ಯಜೀವಿಗಳ ಪ್ರಮಾಣದ ಜತೆ ಹೋಲಿಸಿ ನೋಡಲಿ. ಹೆಚ್ಚುವರಿ ಪ್ರಾಣಿಗಳನ್ನು ಇತರ ರಾಜ್ಯಗಳ ಅರಣ್ಯಗಳಿಗೆ ಸಾಗಿಸುವ ಸಾಧ್ಯತೆ ಕುರಿತು
ಚಿಂತಿಸಲಿ.

ADVERTISEMENT

-ರಾಜಾರಾಮ ನಾಯ್ಕ,ಎಚ್‌.ಡಿ. ಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.