ADVERTISEMENT

ಮೆಚ್ಚುವಂಥ ಕಾಳಜಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 16:07 IST
Last Updated 13 ಜುಲೈ 2018, 16:07 IST

ಯಲ್ಲಾಪುರ ತಾಲ್ಲುಕು ಇಡಗುಂಜಿಯಲ್ಲಿ ಮಕ್ಕಳು ತಾವು ತಿಂದ ಕಾಡು ಹಣ್ಣಿನ ಬೀಜಗಳನ್ನು ಚೀಲದಲ್ಲಿ ತುಂಬಿಕೊಂಡು ಅರಣ್ಯ ಇಲಾಖೆಗೆ ತಲುಪಿಸುತ್ತಿರುವ ಸುದ್ದಿ (ಪ್ರ.ವಾ., ಜುಲೈ 12) ಓದಿ, ಆ ಮಕ್ಕಳ ಪರಿಸರ ಕಾಳಜಿ ಕಂಡು ಖುಷಿಯಾಯಿತು.

ಪ್ರತಿ ಶಾಲೆಯಲ್ಲೂ ಇಂಥ ಚಟುವಟಿಕೆ ನಡೆದರೆ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ, ಕಾಳಜಿ ಮತ್ತು ಪ್ರೀತಿ ಹುಟ್ಟುವುದರಲ್ಲಿ ಸಂದೇಹವಿಲ್ಲ. ಆ ಮಕ್ಕಳಲ್ಲಿ ಮೂಡಿದ ಪರಿಸರ ಪ್ರೀತಿಯೇ ಮುಂದಿನ ದಿನಗಳಲ್ಲಿ ಪರಿಸರ ರಕ್ಷಿಸುವ, ಕಾಡನ್ನು ಬೆಳೆಸುವ ಕ್ರಾಂತಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಇಂಥ ಕಾಳಜಿ ಮೂಡಿಸುತ್ತಿರುವ ಆರ್‌ಎಫ್‌ಒ ಹೇಮವತಿ ಭಟ್ ಅಭಿನಂದನಾರ್ಹರು.

–ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.