ಜಾನಪದ ಲೋಕದಲ್ಲಿ ಇತ್ತೀಚೆಗೆ ‘ಪ್ರವಾಸಿ ಜಾನಪದ ಲೋಕೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರಿಯೆ. ಹಾಡು ಹಸೆ, ಮೇಳ, ನೃತ್ಯ ನಮ್ಮ ಜಾನಪದ ಪರಂಪರೆಯನ್ನು ಸಮರ್ಥವಾಗಿ ಬಿಂಬಿಸಿದವು. ಭಾಗವಹಿಸಿದ ಕಲಾವಿದರಿಗಷ್ಟೇ ಭೋಜನದ ಏರ್ಪಾಡಾಗಿತ್ತು. ಪ್ರೇಕ್ಷಕರು, ಅದರಲ್ಲೂ ದೂರದ ಊರುಗಳಿಂದ ಬಂದವರು ಈ ವ್ಯವಸ್ಥೆಯಿಲ್ಲದೆ ಪಾಡುಪಟ್ಟರು. ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಪ್ರೇಕ್ಷಕರಿಗೆ ಸರಳವಾಗಿಯಾದರೂ ಊಟ ವಿತರಿಸಬಹುದಿತ್ತು.
‘ಬಾಯಾರಿ ಬಂದವರಿಗೆ ಒಂದು ಬಟ್ಟಲು ನೀರು, ಅಷ್ಟು ಅನ್ನ, ಎರಡು ಪ್ರೀತಿಯ ಮಾತು ಇತ್ತಲ್ಲಿ ಅಲ್ಲಿಯೇ ಕಲ್ಯಾಣ’ ಜನನುಡಿ ನೆನಪಾಯಿತು.
-ಬಿಂಡಿಗನವಿಲೆ ಭಗವಾನ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.