ADVERTISEMENT

ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಳವಳಿಗೆ ಬುನಾದಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 20:00 IST
Last Updated 4 ಫೆಬ್ರುವರಿ 2019, 20:00 IST

ಸಮಾಜವಾದಿಗಳಾಗಿದ್ದ ಜಾರ್ಜ್ ಫರ್ನಾಂಡಿಸ್ ಹಾಗೂ ಭದ್ರಾವತಿ ಮಾಜಿ ಶಾಸಕ ಸಾಲೇರ ಸಿದ್ಧಪ್ಪ ಅವರು ಕೆಲವೇ ಗಂಟೆಗಳ ಅಂತರದಲ್ಲಿ ಮೃತರಾಗಿರುವುದು ಕಾಕತಾಳೀಯ. 1983ರಲ್ಲಿ ಸಿದ್ದಪ್ಪ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಫರ್ನಾಂಡಿಸ್‌ ಭದ್ರಾವತಿಯಲ್ಲಿ ಪ್ರಚಾರ ಭಾಷಣ ಮಾಡಿದ್ದರು.ಆಗ ಸಿದ್ಧಪ್ಪ ಗೆಲುವು ಸಾಧಿಸಿದ್ದರು. ಇದು ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಳವಳಿಗಾರರಿಗೆ ಒಂದು ಬುನಾದಿಯನ್ನು ಹಾಕಿಕೊಟ್ಟಿತ್ತು.

ಮಾನವೀಯ ನೆಲೆಯ ಸಮಾಜವಾದವನ್ನು ಜನರಿಗೆ ಪರಿಚಯಿಸಿದ ಕೀರ್ತಿಯು ಈ ಇಬ್ಬರೂ ನಾಯಕರಿಗೆ ಸಲ್ಲುತ್ತದೆ.

-ಸಿ. ಸಿವಾನಂದಪ್ಪ, ವಿಠಗೊಂಡನಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.