ADVERTISEMENT

ಸಭೆಗೆ ಶಿಸ್ತುಬದ್ಧ ಹಾಜರಾತಿ ಮುಖ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:31 IST
Last Updated 9 ಏಪ್ರಿಲ್ 2021, 19:31 IST

ದಾವಣಗೆರೆ ಮಹಾನಗರಪಾಲಿಕೆಯ ಸಾಮಾನ್ಯ ಸಭೆಗೆ ಸದಸ್ಯರೊಬ್ಬರು ಬರ್ಮುಡಾ ಹಾಕಿಕೊಂಡು ಪಾಲ್ಗೊಂಡಿದ್ದು (ಪ್ರ.ವಾ., ಏ. 8) ವಿಷಾದನೀಯ ಸಂಗತಿ. ಸಭೆ ಅಂದರೆ ಅದಕ್ಕೆ ತನ್ನದೇ ಆದ ಗೌರವ ಇರುತ್ತದೆ. ಎಂತಹ ಸಭೆಯೇ ಆಗಲಿ ಅದು ಪ್ರಮುಖ ವಿಷಯಗಳ ಚರ್ಚೆ, ಸಮಸ್ಯೆಗಳ ಮಂಡನೆ, ಪರಿಹಾರಗಳು, ವಿಚಾರ ವಿನಿಮಯಗಳಿಂದ ಕೂಡಿರುತ್ತದೆ. ಸಭೆಗೆ ದಾಖಲೆಗಳ ಜೊತೆ ಶಿಸ್ತುಬದ್ಧವಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ. ನಾವು ಹಾಕಿಕೊಳ್ಳುವ ಬಟ್ಟೆ ನಮ್ಮ ಗುಣವನ್ನು ತೋರಿಸುತ್ತದೆ ಎಂಬ ಮಾತಿದೆ. ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಶಾಸಕರೊಬ್ಬರು ತಮ್ಮ ಶರ್ಟ್ ಬಿಚ್ಚಿ ಸಭೆಗೆ ಅಗೌರವ ತಂದಿದ್ದನ್ನು ನಾವು ನೋಡಿದ್ದೇವೆ. ಇಂತಹ ಪ್ರಸಂಗಗಳನ್ನು ನೋಡಿದರೆ, ಸಭೆ, ಸಮಾರಂಭಗಳಿಗೆ ವಸ್ತ್ರಸಂಹಿತೆ ಜಾರಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ.

–ದಿಲೀಪ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT