ADVERTISEMENT

ವಾಚಕರ ವಾಣಿ | ಹಿಂದಿ ಹೇರಿಕೆ: ಮುತ್ಸದ್ದಿತನದ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 19:30 IST
Last Updated 10 ಆಗಸ್ಟ್ 2020, 19:30 IST

ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ ಎಂದು ಹೇಳಿದ ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತರಾಗಿದ್ದ ಕೇಂದ್ರದ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಅಧಿಕಾರಿಯೊಬ್ಬರು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿರುವುದು ನಿರೀಕ್ಷೆಯಂತೆ ವಿವಾದ ಎಬ್ಬಿಸಿದೆ. ಇದು ಹಿಂದಿ ಹೇರಿಕೆ ಎಂದು ಅವರು ಕೂಡಲೇ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿಂದಿ ಭಾಷೆ ಮಾತನಾಡಲು ಬರದವರು ಭಾರತೀಯರಲ್ಲವೇ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದೆ.

ವರ್ಷಗಳ ಹಿಂದೆ ಉತ್ತರ ಭಾರತದವರೊಬ್ಬರು, ‘ದಕ್ಷಿಣ ಭಾರತದಲ್ಲಿ ಯಾವ ಕರೆನ್ಸಿ ಬಳಸುತ್ತಾರೆ’ ಎಂದು ಕೇಳಿದ್ದರಂತೆ. ಉತ್ತರದವರು ದಕ್ಷಿಣದವರನ್ನು ಬೇರೆ ರಾಷ್ಟ್ರದವರಂತೆ ಕಾಣುತ್ತಾರೆ ಎನ್ನುವ ಆಪಾದನೆ ಕೇಳಿ ಬರುತ್ತಿರುವಾಗ ಇಂತಹ ಘಟನೆ ನಡೆದಿರುವುದು ದುರ್ದೈವ. ಈ ವಿಷಯವನ್ನು ದೊಡ್ಡದು ಮಾಡದೇ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಭದ್ರತಾ ಸಿಬ್ಬಂದಿಗೆ ಇಂಗ್ಲಿಷ್‌ ಮತ್ತು ಹಿಂದಿ ಎರಡೂ ಭಾಷೆಗಳನ್ನು ಕಲಿಸಬೇಕು ಎಂದು ಪ್ರತಿಕ್ರಿಯಿಸಿ ಮುತ್ಸದ್ದಿತನ ಮೆರೆದಿರುವುದು ಶ್ಲಾಘನೀಯ.

-ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.