ADVERTISEMENT

ಹುಂಬತನದಿಂದ ಅಪಾಯ ಕಟ್ಟಿಟ್ಟ ಬುತ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:01 IST
Last Updated 16 ಸೆಪ್ಟೆಂಬರ್ 2019, 20:01 IST

‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಜೊತೆ ಸಾಂಪ್ರದಾಯಿಕ ಯುದ್ಧ ನಡೆಯುವ ಸಾಧ್ಯತೆ ಇದೆ’ ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆ ಗಮನಿಸಿದರೆ (ಪ್ರ.ವಾ., ಸೆ.16), ಅವರು ಯುದ್ಧವನ್ನು ಲಘುವಾಗಿ ಪರಿಗಣಿಸಿದಂತೆ ತೋರುತ್ತದೆ. ಇಮ್ರಾನ್‌ ಅವರಿಗೆ ಮುಂದಾಲೋಚನೆ ಇದ್ದಿದ್ದರೆ, ಯುದ್ಧದಿಂದ ಎರಡೂ ದೇಶಗಳಿಗೆ ಅಪಾರ ನಷ್ಟವಾಗುತ್ತದೆ ಎಂಬುದು ತಿಳಿಯದೇ ಇರುತ್ತಿರಲಿಲ್ಲ. ‘ಯುದ್ಧದಲ್ಲಿ ಗೆದ್ದವ ಸೋತಂತೆ, ಸೋತವ ಸತ್ತಂತೆ’ ಎಂಬುದನ್ನು ಅರಿತು,ಭಯೋತ್ಪಾದಕರಿಗೆ ಸಹಾಯಹಸ್ತ ನಿಲ್ಲಿಸಿ, ತಮ್ಮ ದೇಶದ ಅಭಿವೃದ್ಧಿಯ ಕಡೆ ಅವರು ಗಮನ ಹರಿಸಲಿ.ಹುಂಬತನ ಬೇಡ.

-ರಾಜಶೇಖರ ಎಸ್. ಗುಬ್ಬಿ,ಮನಗೂಳಿ, ಬಸವನಬಾಗೇವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT