ADVERTISEMENT

ಹಲವು ಸುಳ್ಳುಗಳಿಗೆ ಸಾಕ್ಷಿಯಾಯ್ತು ಒಂದು ಚಿತ್ರ!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 20:32 IST
Last Updated 15 ನವೆಂಬರ್ 2019, 20:32 IST

‘ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದವರಲ್ಲ. ಅವರು ನಮ್ಮ ಸಂಪರ್ಕದಲ್ಲಿಲ್ಲ. ರೆಸಾರ್ಟ್‌ಗಳಲ್ಲಿ ಆಶ್ರಯ ಕೊಟ್ಟವರು ನಾವಲ್ಲ. ಅದರ ಬಿಲ್ ಪಾವತಿಸಿದ್ದು ನಾವಲ್ಲ’– ಖಂಡಿತಾ ಜನ ನಂಬಿದ್ದರು ಬಿಜೆಪಿ ಮುಖಂಡರ ಈ ಮಾತುಗಳನ್ನೆಲ್ಲ! ನಂಬಲೇಬೇಕಾಗಿತ್ತು. ಆದರೆ... ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಚಿತ್ರ (ಪ್ರ.ವಾ., ನ. 15), ಹಲವಾರು ಬಾರಿ ಅಲ್ಲಗಳೆದದ್ದೆಲ್ಲ ‘ಸುಳ್ಳು’ ಎನ್ನುವುದಕ್ಕೆ ಬಹಿರಂಗ ಸಾಕ್ಷಿಯಾಯಿತು!

‘ಅನರ್ಹ ಶಾಸಕರಿಗೆ ನಾವು ಕೊಟ್ಟ ಭರವಸೆಯನ್ನು ಪಾಲಿಸುತ್ತೇವೆ, ನಂಬಿಕೆದ್ರೋಹ ಮಾಡುವುದಿಲ್ಲ’ ಎಂದು ಪಕ್ಷದ ಮುಖಂಡರು ಸ್ಪಷ್ಟ ಭರವಸೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ಅನರ್ಹ ಶಾಸಕರು ಭಾವಿ ಶಾಸಕರು, ಭಾವಿ ಸಚಿವರು’ ಎಂದು ಹೇಳಿರುವುದಂತೂ ಚುನಾವಣೆಯು ತೆರೆಮರೆಯಲ್ಲಿ ನಡೆಸುವ ಮೇಲಾಟಕ್ಕೆ ನಿದರ್ಶನದಂತಿದೆ.

–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.