ಕೊಡಗಿನ ನೆರೆ ಅರಗಿಸಿಕೊಳ್ಳಲಾಗದ ವಾಸ್ತವ. ಅಲ್ಲಿನ ಸಂತ್ರಸ್ತ ಜನರಿಗೆ ಆರ್ಥಿಕ ಅಗತ್ಯಗಳಷ್ಟೇ ಭಾವನಾತ್ಮಕ ಸ್ಪಂದನೆಯೂ ಅವಶ್ಯಕ. ರಜಾ ದಿನಗಳನ್ನು ಕಳೆಯಲು ನಾವೆಲ್ಲ ಅದೆಷ್ಟೋ ಬಾರಿ ಕೊಡಗಿಗೆ ಹೋಗಿದ್ದೇವೆ. ಅಲ್ಲಿನ ಜನರು ಸಂಕಷ್ಟದಲ್ಲಿರುವಾಗ, ‘ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ’ ಎಂಬ ಭರವಸೆ ಮೂಡಿಸಬೇಕಾಗಿದೆ.
ಭೌತಿಕ ವಸ್ತುಗಳ ಜೊತೆಗೆ ಸಂತ್ರಸ್ತರ ಮಾನಸಿಕ ಅಗತ್ಯಗಳನ್ನು ಸಹ ಅರಿತುಕೊಂಡು ಅವರಿಗೆ ಬಹು ಆಯಾಮದ ಪರಿಹಾರ ಮಾದರಿಯನ್ನು ರೂಪಿಸಬೇಕಾಗಿದೆ.
ಗುಂಪು ಚರ್ಚೆಗಳು, ಯೋಗ, ಧ್ಯಾನ, ಪ್ರಾರ್ಥನೆ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಅವರಲ್ಲಿ ವಾಸ್ತವದ ಅರಿವು ಮೂಡಿಸಬೇಕು. ‘ಪರಿಸ್ಥಿತಿ ಬದಲಾಗುತ್ತದೆ, ಬದುಕು ಮತ್ತೆ ಸಹಜ ಸ್ಥಿತಿಗೆ ಬರುತ್ತದೆ’ ಎಂಬ ಭರವಸೆಯನ್ನು ಪುನರ್ವಸತಿ ಕೇಂದ್ರಗಳಲ್ಲಿರುವ ಜನರಲ್ಲಿ ಮೂಡಿಸಬೇಕು. ಅದಕ್ಕಾಗಿ ಎಲ್ಲರೂ ಬಿಡುವು ಮಾಡಿಕೊಂಡು, ಪುನರ್ವಸತಿ ಕೇಂದ್ರಗಳಿಗೆ ಒಂದೆರಡು ಬಾರಿಯಾದರೂ ಭೇಟಿ ನೀಡೋಣ.
-ಡಾ. ಶ್ವೇತಾ ಬಿ.ಸಿ., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.