ADVERTISEMENT

ರಜೆ ಸೌಲಭ್ಯ: ಪುನರ್‌ ಪರಿಶೀಲನೆಯಾಗಲಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST

ರಾಜ್ಯ ಸರ್ಕಾರ ನಾಲ್ಕನೆಯ ಶನಿವಾರವೂ ಸರ್ಕಾರಿ ನೌಕರರಿಗೆ ರಜೆ ನೀಡಿ, ಕಡತಗಳ ವಿಲೇವಾರಿಗೆ ಇನ್ನಷ್ಟು ತುಕ್ಕು ಹಿಡಿಸಿದೆ. ಒಂದೆಡೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಾರೆ.

ಇನ್ನೊಂದೆಡೆ, ನಾಲ್ಕನೇ ಶನಿವಾರದ ರಜೆ ಕಡತಕ್ಕೆ ಅವರು ರುಜು ಹಾಕುತ್ತಾರೆ. ಹೀಗಾದರೆ ಸರ್ಕಾರಿ ಯಂತ್ರ ಚುರುಕುಗೊಳ್ಳಲು ಸಾಧ್ಯವೇ?

ಈಗಾಗಲೇ ಕೇಂದ್ರ ಸರ್ಕಾರವು ಬ್ಯಾಂಕ್‌ ವಲಯಕ್ಕೆ ಇಂತಹ ರಜೆ ಅವಕಾಶ ನೀಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ. ರಾಜ್ಯ ಸರ್ಕಾರವೂ ಇಂತಹುದೇ ಕ್ರಮ ಕೈಗೊಂಡಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸಲಿ.

ADVERTISEMENT

ವಿ.ಜಿ.ಇನಾಮದಾರ,ಸಾರವಾಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.