‘ಹರಕು ಬಾಯಿ ಶೂರರೇ ಬಿಜೆಪಿಗೆ ಹೊರೆ’ (ಪ್ರ.ವಾ., ಗತಿಬಿಂಬ, ನ. 13). ‘ಹೊಸ್ತಿಲಲ್ಲಿ ಹುಲ್ಲು ಹುಟ್ಟಿ...’ ಎಂಬ ಬಸವಣ್ಣನವರ ವಚನ ಬಿಜೆಪಿಯ ಈಗಣ ಸ್ಥಿತಿಗೆ ಸೂಕ್ತ ವ್ಯಾಖ್ಯಾನದಂತಿದೆ’ ಎನ್ನುತ್ತಾರೆ, ವೈ.ಗ. ಜಗದೀಶ್.
ಈ ಮಾತು ಎಲ್ಲ ರಾಜಕೀಯ ಪಕ್ಷಗಳಿಗೂ ಅಷ್ಟೋ ಇಷ್ಟೋ ಅನ್ವಯಿಸುತ್ತದೆ ಮಾತ್ರವಲ್ಲ; ಅವುಗಳ ಪರಿಧಿಯನ್ನು ದಾಟಿ ಬಹುಪಾಲು ಜನಜೀವನಕ್ಕೇ ಅನ್ವಯಿಸಲಾರದೆ? ‘ಮನೆಯೊಳಗೆ ಮನೆಯೊಡೆಯ’ನೂ ಇಲ್ಲ, ಒಡತಿಯೂ ಇಲ್ಲ! (ಹರಕು ಬಾಯಿ ಮಾತ್ರವಲ್ಲ, ಹಲವರದು ಹರಕುಕಚ್ಚೆ ಎಂದರೆ ತಪ್ಪಾಗದು). ಜಗದೀಶ್ ಅವರಿಗೇಕೆ ಬಿಜೆಪಿ ಬಗೆಗೆ ಇಷ್ಟರಮಟ್ಟಿಗೆ ಕೆಂ(ಡ)ಗಣ್ಣು? (ಅತಿಯಾಯಿತು, ಅವರ ಹಳಿವು!)
ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.