‘ಬರೆದಂತೆ ಬದುಕಿದರು ಈ ಕವಿ’ (ವಾ.ವಾ., ಜುಲೈ 10). ಜಯವಂತ ಕಾಡದೇವರ ಅವರು ಬ.ಗಿ.ಯಲ್ಲಟ್ಟಿಯವರ ಬಗೆಗೆ ಬರೆದಿದ್ದಾರೆ. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೆ (ಸುಮಾರು 63 ವರ್ಷಗಳ ಹಿಂದೆ) ಯಲ್ಲಟ್ಟಿಯವರ ‘ರಸಿಕ ಪಕ್ಷಿ’ ಎಂಬ ಕವನ ಸಂಕಲನ ಹೊರಬಂತು. ಆ ಕಾಲಕ್ಕೆ ಅದೊಂದು ಗಮನಾರ್ಹ ಕೃತಿ (ಈಗ ಹೆಸರುವಾಸಿಯಾಗಿರುವ ಬಹುಮಂದಿ ಕವಿಗಳು ಆಗ ಎಲ್ಲಿದ್ದರು?).
ಕವಿ ಈಶ್ವರ ಸಣಕಲ್ಲರನ್ನು ನೆನಪಿಸುತ್ತಾರೆ, ಯಲ್ಲಟ್ಟಿ. ಸಣಕಲ್ಲರ ಪ್ರಸಿದ್ಧ ಸೂಕ್ತಿಯಿದು: ‘ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ!’.
– ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.