ಕುವೆಂಪು ನಮ್ಮವರು, ಬಸವಣ್ಣ ನಮ್ಮವರು
ಕನಕ ನಮಗೆ ಮಾತ್ರ, ಅಂಬೇಡ್ಕರ್ ಅನ್ಯರಿಗಲ್ಲ
ಎಂದೇಕೆ ನಿಮ್ಮ ನಿಮ್ಮಲ್ಲೇ ಕಟ್ಟಿ ಹಾಕುವಿರಿ
ಬಿಟ್ಟುಬಿಡಿ ಅವರನ್ನು ಹಾರುವ ಹಕ್ಕಿಗಳಂತೆ
ಹೋಗಿ ಕೂರಲಿ ಎಲ್ಲ ಮರಗಳಲಿ
ಎಲ್ಲರ ಮನೆ ಮೇಲೆ
ಎಲ್ಲರ ಮನಗಳಲಿ ಅವರಿಷ್ಟದಂತೆ
ಎಲ್ಲರೂ ಸೇರಿಯೇ ಕನ್ನಡ, ಕರ್ನಾಟಕ, ಭಾರತ
ಎಲ್ಲವೂ ಇದ್ದರೆ ಊಟ ರಸಭರಿತ
ಇಲ್ಲದವರ ಹೆಸರಲ್ಲಿ ಜಗಳ
ಇರುವವರ ತಲೆಯೊಳಗೆ ಕೆಟ್ಟ ಹುಳ
ತಿದ್ದುವುದಕ್ಕೆ ಅವರು ಎದ್ದು ಬರುವುದಿಲ್ಲ
ತಿದ್ದಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ
ನಾವು ಮಾದರಿಯಾಗುವುದಿಲ್ಲ.
- ಟಿ.ಆರ್.ರಘುನಾಥ್,ಬೆಂಗಳೂರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.