ಪುನೀತ್ ರಾಜ್ಕುಮಾರ್ ಸಾವು ಕನ್ನಡ ನಾಡು ಸುಲಭವಾಗಿ ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಈ ಮೂರು ದಿನಗಳ ಕಾಲ ಲಕ್ಷಾಂತರ ಅಭಿಮಾನಿಗಳು ನಾಡಿನ ಮೂಲೆ ಮೂಲೆಯಿಂದ ಅಂತಿಮ ದರ್ಶನಕ್ಕಾಗಿ ಬಂದಿದ್ದರು. ಅವರನ್ನೆಲ್ಲಾ ಅತ್ಯಂತ ಸಮರ್ಥವಾಗಿ ನಿಭಾಯಿಸಲು ಪೊಲೀಸ್ ಬಾಂಧವರು ಪಟ್ಟ ಶ್ರಮ ಅನನ್ಯವಾದದ್ದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಸಿಲು, ಮಳೆ ಚಳಿ ಲೆಕ್ಕಿಸದೇ ಜೊತೆಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ನೀರು ಇರದಿದ್ದರೂ ಕರ್ತವ್ಯಪ್ರಜ್ಞೆ ಮೆರೆದ ಸಾವಿರಾರು ಪೊಲೀಸ್ ಸೇನಾನಿಗಳಿಗೆ ಕನ್ನಡ ಜನತೆ ಶಿರಬಾಗಿ ನಮಿಸುತ್ತದೆ.
-ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.