ADVERTISEMENT

ಮಕ್ಕಳ ಊಟದಲ್ಲಿ ರಾಜಕೀಯ ಅನಗತ್ಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 20:00 IST
Last Updated 6 ಅಕ್ಟೋಬರ್ 2019, 20:00 IST

ಬಿಸಿಯೂಟದ ಜೊತೆಗೆ ಮಕ್ಕಳಿಗೆ ಮೊಟ್ಟೆ ನೀಡಬೇಕೋ ಅಥವಾ ಮೊಳಕೆಕಾಳು ನೀಡಬೇಕೋ ಎಂಬ ವಿವಾದ ಸೃಷ್ಟಿಯಾಗಿರುವುದು ವಿಷಾದನೀಯ (ಪ್ರ.ವಾ., ಅ. 6). ಮಕ್ಕಳಿಗೆ ಪೌಷ್ಟಿಕ ಆಹಾರ ತುಂಬಾ ಅತ್ಯಗತ್ಯ. ಮೊಟ್ಟೆ ಮತ್ತು ಮೊಳಕೆಕಾಳುಗಳಲ್ಲಿ ಹೇರಳವಾಗಿ ಪೋಷಕಾಂಶಗಳಿರುವುದು ಸೂರ್ಯಸ್ಪಷ್ಟ.

ಲಕ್ಷಾಂತರ ಬಡ ಮಕ್ಕಳು ತಮ್ಮ ಕಲಿಕೆಗೆ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಅವರಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟ ಪೂರೈಸುವುದು ಸರ್ಕಾರದ ಆದ್ಯ ಕರ್ತವ್ಯ.

ಸರ್ಕಾರ ಯಾವುದೇ ಒಂದು ವರ್ಗದ ಓಲೈಕೆಗೆ ಮಣಿಯದೆ, ಒಂದು ದಿನ ಮೊಟ್ಟೆ, ಮತ್ತೊಂದು ದಿನ ಮೊಳಕೆಕಾಳನ್ನು ಮಕ್ಕಳಿಗೆ ನೀಡಿದರೆ ಅನುಕೂಲವಾಗುತ್ತದೆ. ಇದರಲ್ಲಿ ಅನಗತ್ಯ ವಿವಾದ ಸಲ್ಲದು.

ADVERTISEMENT

-ಗಣೇಶ ಆರ್.,ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.