ADVERTISEMENT

ಅತಿರೇಕದ ಅಭಿಮಾನ ತರವಲ್ಲ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 19:31 IST
Last Updated 12 ಮಾರ್ಚ್ 2021, 19:31 IST

ದರ್ಶನ್ ಅಭಿನಯದ ‘ರಾಬರ್ಟ್‌’ ಚಲನಚಿತ್ರ ಪ್ರದರ್ಶಿತವಾಗುತ್ತಿದ್ದ ತಿಪಟೂರಿನ ಚಿತ್ರಮಂದಿರದಲ್ಲಿನ ದರ್ಶನ್ ಕಟೌಟ್‌ಗೆ ಅಭಿಮಾನಿಗಳು ಮದ್ಯ ಸುರಿದು ಸಂಭ್ರಮಿಸಿರುವುದು ವರದಿಯಾಗಿದೆ (ಪ್ರ.ವಾ.,ಮಾರ್ಚ್‌ 12). ಅಭಿಮಾನಿಗಳು ನಾಯಕನಟರ ಕಟೌಟ್‌ಗಳ ಮೇಲೆ ಹಾಲು, ಎಳನೀರು ಮುಂತಾದ ದ್ರವಗಳನ್ನು ಸುರಿದು ಮತ್ತು ಹಣ್ಣಿನ ಹಾರಗಳನ್ನು ಹಾಕಿ ಸಂಭ್ರಮಿಸುವುದು ಹೊಸತೇನಲ್ಲ. ಆದರೆ, ಮದ್ಯ ಸುರಿದು ಅಭಿಷೇಕ ಮಾಡಿದ್ದು ಹೊಸತು. ಈ ರೀತಿ ಹಣ್ಣು– ಹಾಲಿನಂತಹ ಆಹಾರ ಪದಾರ್ಥಗಳನ್ನು ಹೀಗೆ ಉಪಯೋಗಕ್ಕೆ ಬರದಂತೆ ವ್ಯರ್ಥ ಮಾಡುವ ಬದಲು, ಬಡಮಕ್ಕಳಿಗೆ ಹಂಚಿದಲ್ಲಿ ದೇವರು ಮೆಚ್ಚುವುದರ ಜೊತೆಗೆ ಸದರಿ ನಾಯಕ ನಟರೂ ಬೆನ್ನುತಟ್ಟಿ ಪ್ರೋತ್ಸಾಹಿಸಬಹುದು.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT