ADVERTISEMENT

ಪ್ರಜಾವಾಣಿ@75 | ಹಲವು ಹೋರಾಟಗಳಿಗೆ ಪತ್ರಿಕೆಯೇ ಸ್ಫೂರ್ತಿ –ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 10:27 IST
Last Updated 11 ನವೆಂಬರ್ 2022, 10:27 IST
ಶಾಸಕ ರಾಮಲಿಂಗಾರೆಡ್ಡಿ
ಶಾಸಕ ರಾಮಲಿಂಗಾರೆಡ್ಡಿ   

ನನ್ನ ಅರಿವಿನ ಜಗತ್ತನ್ನು ವಿಸ್ತರಿಸಿದ ಪತ್ರಿಕೆ 'ಪ್ರಜಾವಾಣಿ'. ಶಾಲಾ ದಿನಗಳಿಂದಲೂ ಪತ್ರಿಕೆಯನ್ನು ಓದುತ್ತಾ ಬಂದಿದ್ದೇನೆ. ಇವತ್ತಿಗೂ ಪತ್ರಿಕೆಯ ಓದಿನೊಂದಿಗೆ ನನ್ನ ದಿನಚರಿ ಪ್ರಾರಂಭವಾಗುತ್ತದೆ.

ಯಾರ ಪರವಾಗಿ, ಯಾರ ವಿರುದ್ಧವಾಗಿ ನಿಲ್ಲದೆ, ನ್ಯಾಯದ ಪರ ನಿಲ್ಲುತ್ತಾ ಬಂದಿರುವ ಪತ್ರಿಕೆ ವ್ಯವಸ್ಥೆಯಲ್ಲಿನ ಅಸಮಾನತೆ, ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುತ್ತಾ ಬಂದಿದೆ.ಹೀಗಾಗಿ ನಾಡಿನ ಚರಿತ್ರಾರ್ಹ ಬದಲಾವಣೆಗಳಲ್ಲಿ ಪ್ರಜಾವಾಣಿ ಹೆಗ್ಗುರುತಾಗಿ ನಿಲ್ಲುತ್ತದೆ.

ನನ್ನ ರಾಜಕೀಯ ಬದುಕಿನ ಹಲವು ಹೋರಾಟಗಳಿಗೆ ಪತ್ರಿಕೆಯೇ ಸ್ಫೂರ್ತಿ.

ADVERTISEMENT

ಏಕಕಾಲಕ್ಕೆ ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ವಿದ್ಯಮಾನಗಳ ವಿವರ ನೀಡುತ್ತಾ, ವ್ಯವಸ್ಥೆಯನ್ನು ಕಟ್ಟಲು ಅದು ಶ್ರಮಿಸಿರುವ ರೀತಿ ಈಗ ಚರಿತ್ರೆ.

75ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಜಾವಾಣಿಗೆ ಅಭಿನಂದನೆ ಸಲ್ಲಿಸುತ್ತಾ, ಅದು ಹೀಗೆಯೇ ನಿಷ್ಪಕ್ಷಪಾತವಾಗಿ ನಾಡು ಕಟ್ಟಲಿ, ಜನರ ಅರಿವಿನ ಪರಿಧಿಯನ್ನು ಹೆಚ್ಚಿಸುತ್ತಾ ಹೋಗಲಿ ಎಂಬುದು ನನ್ನ ಆಶಯ.
–ರಾಮಲಿಂಗಾರೆಡ್ಡಿ, ಶಾಸಕರು, ಬಿಟಿಎಂ ಲೇಔಟ್‌ ವಿಧಾನಸಭೆ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.