ADVERTISEMENT

ವಾಚಕರ ವಾಣಿ: ಸಂವೇದನಾಶೀಲ ಸೇವೆ ವಿಸ್ತರಣೆಯಾಗಲಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 22:15 IST
Last Updated 10 ಮೇ 2022, 22:15 IST

ರೈತರ ಜಾನುವಾರುಗಳಿಗೆ ಮನೆಗೇ ಬಂದು ಚಿಕಿತ್ಸೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನವನ್ನು ರಾಜ್ಯದಲ್ಲಿ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಪಶುಸಂಗೋಪನಾ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜಾನುವಾರುಗಳ ಮಾಲೀಕರು ತಮ್ಮ ಪಶುಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬಹುದಾಗಿದೆ. ಈ ಪಶುಚಿಕಿತ್ಸಾ ಆಂಬುಲೆನ್ಸ್ ಸೇವೆಯಿಂದ ಅನಾರೋಗ್ಯಪೀಡಿತ ಹಲವಾರು ಜಾನುವಾರುಗಳನ್ನು ರಕ್ಷಿಸಬಹುದಾಗಿದೆ. ಸಂವೇದನಾಶೀಲವಾಗಿರುವ ಈ ಸೇವೆಯನ್ನು ಬೀದಿ ನಾಯಿಗಳು ಮತ್ತು ಮಂಗಗಳಿಗೂ ಅನ್ವಯಿಸುವಂತಾದರೆ ಒಳ್ಳೆಯದು.

ರಾಸುಮ ಭಟ್,ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT