ADVERTISEMENT

ವಾಚಕರ ವಾಣಿ | ಭ್ರಷ್ಟಾಚಾರ ಆರೋಪ; ಪಂಜಾಬ್ ಸಚಿವರ ವಜಾ, ಹೊಸ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 26 ಮೇ 2022, 19:11 IST
Last Updated 26 ಮೇ 2022, 19:11 IST

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ವಿಜಯ್‌ ಸಿಂಗ್ಲಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸಂಪುಟದಿಂದ ವಜಾಗೊಳಿಸಿ ಬಂಧಿಸಲಾಗಿದೆ. ಇದು ಎಎಪಿಯು ಭ್ರಷ್ಟಾಚಾರದ ವಿರುದ್ಧ ಸಾರ್ವತ್ರಿಕವಾಗಿ ಮೂಡಿಸಿದ ಹೊಸ ಆಶಾಕಿರಣ.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ, ಶಿಸ್ತು, ಸ್ವಚ್ಛ ಎಂದು ಹೇಳಿಕೊಳ್ಳುವ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಶೇ 40ರ ಕಮಿಷನ್ ಆರೋಪ ಕೇಳಿಬಂದರೂ ಇಲ್ಲಿ ಇದು ಸಹಜ ಎಂಬಂತೆ ಅಧಿಕಾರಸ್ಥರು ನಡೆದುಕೊಂಡಿದ್ದಾರೆ. ಸಂಬಂಧಿಸಿದ ಸಚಿವರನ್ನು ಆಡಳಿತ ಪಕ್ಷದ ಮುಖಂಡರು ಸಮರ್ಥಿಸಿಕೊಳ್ಳಲು ಸಹ ಹಿಂದೇಟು ಹಾಕುವುದಿಲ್ಲ. ರಾಜಕಾರಣದ ಎಲ್ಲ ಮಗ್ಗುಲಿನಲ್ಲಿ ತುಂಬಿಕೊಂಡಿರುವ ಭ್ರಷ್ಟಾಚಾರಕ್ಕೆ ಹೀಗಾದರೆ ಕೊನೆ ಎಂದು? ಪಂಜಾಬ್ ಮಾದರಿ ಅನುಕರಣೀಯವಲ್ಲವೇ?
ಗಣಪತಿ ಶಿರಳಗಿ,ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT