ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಪ್ರಸ್ತಾಪಿಸಿದ್ದು ಅನುಚಿತವಾಗಿದೆ. ‘ಮರಣಾಂತಾನಿ ವೈರಾಣಿ’- ಇದು ಈ ದೇಶದ ಆರ್ಷ ಧರ್ಮ ಹೇಳುವ ವಿವೇಕ. ಪ್ರಧಾನಿ ಮಾತಿನಿಂದ ಕ್ರೋಧಗೊಂಡಿರುವ ಕಾಂಗ್ರೆಸ್ ಪಕ್ಷ, ತಾನೇನೂ ಸಾಚಾ ಅಥವಾ ಸಭ್ಯ ಎಂದುಕೊಳ್ಳುವ ಅಗತ್ಯವಿಲ್ಲ. ಆ ಪಕ್ಷದ ಪ್ರಮುಖ ನಾಯಕರಿಂದ ಮೊದಲ್ಗೊಂಡು ಕೆಳಹಂತದನಾಯಕರವರೆಗೂ ಪ್ರಧಾನಿಯನ್ನು ಹೀಯಾಳಿಸುತ್ತಿರುವ ಬಗೆಯನ್ನು ನಾವು ಗಮನಿಸಬೇಕು.
ರಾಹುಲ್ ಗಾಂಧಿ ಅವರು ಚುನಾವಣಾ ವೇದಿಕೆಗಳಲ್ಲಿ ಪದೇ ಪದೇ ತಮ್ಮನ್ನು ನಿಂದಿಸಿದ್ದರಿಂದ ಮೋದಿ ಕ್ರುದ್ಧರಾದರೆಂದು ತೋರುತ್ತದೆ. ಆದಾಗ್ಯೂ ಅವರು ದಿವಂಗತ ವ್ಯಕ್ತಿಯ ಬಗ್ಗೆ ಪ್ರಸ್ತಾಪ ಮಾಡದಿದ್ದರೆ ಒಳಿತಿತ್ತು. ಈ ದೇಶದ ಪ್ರಧಾನಿ ಆಗುವ ಕನಸು ಹೊಂದಿರುವ ರಾಹುಲ್ ಕೂಡ ಆ ಹುದ್ದೆಗೆ ಅಗತ್ಯವಾದ ಗಾಂಭೀರ್ಯ, ಪ್ರೌಢಿಮೆ ತಮಗಿವೆ ಎನ್ನುವುದನ್ನು ಸಾಬೀತು ಮಾಡಿಲ್ಲ. ಒಬ್ಬ ಪ್ರಧಾನಿಯ ಬಗ್ಗೆ ಅವರು ಬಳಸುವ ಭಾಷೆ ಸಹ ಸರಿಯಿಲ್ಲ.
-ಸಾಮಗ ದತ್ತಾತ್ರಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.