ಮಲೆನಾಡು ಭಾಗದಲ್ಲಿ ಮಂಗಗಳ ಮಿತಿಮೀರಿದ ಹಾವಳಿಯನ್ನು ಮುಂದಿಟ್ಟುಕೊಂಡು, ಒಂದು ಪಾರ್ಕ್ ನಿರ್ಮಿಸಿ ಅವುಗಳನ್ನು ಅಲ್ಲಿಟ್ಟು ಸಾಕಲು ಮುಂದಾಗಿದೆ ಸರ್ಕಾರ. ಆದರೆ, ಮರದಿಂದ ಮರಕ್ಕೆ ಹಾರುವ ಈ ವಾನರನನ್ನು ಹೀಗೆ ಒಂದೆಡೆ ಕೂಡಿಹಾಕುವುದು ಸುಲಭದ ಮಾತೇ?
ದಿನನಿತ್ಯ ಆಹಾರಕ್ಕಾಗಿ ಕಾಡಿನಲ್ಲಿ ಮೈಲಿಗಟ್ಟಲೆ ಆಲೆದಾಡುವ ವಾನರನನ್ನು ಒಂದೆಡೆ ಕೂಡಿಹಾಕಿದರೆ, ಅದರ ಪರಿಣಾಮ ಊಹಿಸಲು ಅಸಾಧ್ಯ. ನಾಡು ಮಾಡಲು ಕಾಡು ಕಡಿಮೆ ಮಾಡಿದ ನಾವು, ಇಂದು ಮಂಗಗಳ ಮನೆಯನ್ನು ಆಕ್ರಮಿಸಿಕೊಂಡಿದ್ದೇವೆ. ಅವು ಮತ್ತೆಲ್ಲಿ ಬದುಕಲು ಸಾಧ್ಯ?
-ಗಣಪತಿ ನಾಯ್ಕ, ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.