ADVERTISEMENT

ವಾಚಕರ ವಾಣಿ | ಪರಿಸರಸ್ನೇಹಿ ಗುಜರಿ ನೀತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 19:45 IST
Last Updated 15 ಆಗಸ್ಟ್ 2021, 19:45 IST

ಪ್ರಧಾನಿ ನರೇಂದ್ರ ಮೋದಿ ಅವರುಚಾಲನೆ ನೀಡಿರುವ ‘ಮೋಟಾರು ವಾಹನ ಗುಜರಿ’ ನೀತಿ ಪರಿಸರಸ್ನೇಹಿ ಹಾಗೂ ಗ್ರಾಹಕಸ್ನೇಹಿಯಾಗಿದೆ. ಈ ನೀತಿಯಂತೆ, 15 ವರ್ಷ ತುಂಬಿದ ಸರ್ಕಾರದ ನಾಲ್ಕು ಚಕ್ರ ವಾಹನಗಳು ಗುಜರಿ ಸೇರುತ್ತವೆ. 20 ವರ್ಷ ದಾಟಿದ ಖಾಸಗಿ ಹಾಗೂ 15 ವರ್ಷ ದಾಟಿದ ವಾಣಿಜ್ಯ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಿ ಅರ್ಹತಾಪತ್ರ ಪಡೆಯಬೇಕಾಗುತ್ತದೆ. ಇಲ್ಲವಾದಲ್ಲಿ ಅಂತಹ ವಾಹನಗಳ ನೋಂದಣಿ ತನ್ನಿಂದತಾನೇ ರದ್ದಾಗುವುದರಿಂದ ಗತ್ಯಂತರವಿಲ್ಲದೆ ಗುಜರಿ ಸೇರುತ್ತವೆ.

ಅವಧಿ ಮೀರಿದ ತಮ್ಮ ವಾಹನವನ್ನು ಗುಜರಿಗೆ ನೀಡುವ ವಾಹನ ಮಾಲೀಕರಿಗೆ ಹೊಸ ವಾಹನದ ಮೌಲ್ಯದಲ್ಲಿ ರಿಯಾಯಿತಿ, ವಾಹನ ನೋಂದಣಿಯಲ್ಲಿ ರಿಯಾಯಿತಿ ಹಾಗೂ ರಸ್ತೆ ತೆರಿಗೆಯಲ್ಲೂ ಶೇ 25ರಷ್ಟು ಕಡಿಮೆಯಾಗುವುದರಿಂದ ಅಷ್ಟೇನೂ ಆರ್ಥಿಕ ಹೊಡೆತ ಬೀಳಲಾರದು. ಹಳೆ ವಾಹನದ ನಿರ್ವಹಣೆ ವೆಚ್ಚ ಸಹಜವಾಗಿಯೇಹೆಚ್ಚಾಗಿರುತ್ತದೆ ಹಾಗೂ ಇಂಧನ ಕ್ಷಮತೆ (ಮೈಲೇಜ್) ಕಡಿಮೆಯಾಗಿರುತ್ತದೆ ಎನ್ನುವುದನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.

‘ಮೋಟಾರು ವಾಹನ ಗುಜರಿ’ ನೀತಿಯಿಂದಾಗಿ ಪರಿಸರ ಮಾಲಿನ್ಯ ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ. ವಿದ್ಯುತ್ ಚಾಲಿತ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಿದಂತಾಗಿ ಹೊಸ ಉದ್ಯಮಗಳಿಗೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ಕಚ್ಚಾ ಸಾಮಾಗ್ರಿ ಆಮದು ಗಣನೀಯವಾಗಿ ಕಡಿಮೆಯಾಗುತ್ತದೆ. ಹೊಸದಾಗಿ ಗುಜರಿ ಉದ್ಯಮಗಳು ಸ್ಥಾಪನೆಗೊಳ್ಳುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಎಲ್ಲ ಅನುಕೂಲಗಳಿಂದಾಗಿ ಹೊಸ ನೀತಿ ಸ್ವಾಗತಾರ್ಹವಾಗಿದೆ.

ADVERTISEMENT

- ಜಿ.ನಾಗೇಂದ್ರ,ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.