ADVERTISEMENT

ವಾಚಕರ ವಾಣಿ | ಬೇಕಾಗಿದೆ ‘ಗ್ಯಾರಂಟಿ’ ಪತ್ರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಜೂನ್ 2022, 19:45 IST
Last Updated 17 ಜೂನ್ 2022, 19:45 IST

ಕೇಂದ್ರ ಸರ್ಕಾರವು ಪ್ರಕಟಿಸಿರುವ ‘ಅಗ್ನಿಪಥ’ ಯೋಜನೆಯಿಂದ ಯುವಕರಿಗೆ ಪ್ರಯೋಜನ ಸಿಗಬಹುದು. ಆದರೆ 15-20 ವರ್ಷಗಳ ಸೇನಾ ಕರ್ತವ್ಯದ ಬಳಿಕ ಮರಳಿ ಬಂದಿರುವ ನಿವೃತ್ತ ಸೈನಿಕರು ರಾಜ್ಯ ಸರ್ಕಾರದಲ್ಲಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗದೆ ಅಲೆದಾಡುತ್ತಿರುವ ಬಹಳಷ್ಟು ನಿದರ್ಶನಗಳು ನಮ್ಮ ಮುಂದೆ ಇವೆ. ಪರಿಸ್ಥಿತಿ ಹೀಗಿರುವಾಗ, ಇನ್ನು ನಾಲ್ಕು ವರ್ಷ ಕರ್ತವ್ಯ ಮಾಡಿ ಬಂದವರಿಗೆ ಕೆಲಸ ಸಿಗುತ್ತದೆ ಎಂಬ ಖಾತರಿಯೇನು? ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ದೊರಕಿಸಿಕೊಡಲು ಕೇಂದ್ರ ಸರ್ಕಾರ ‘ಗ್ಯಾರಂಟಿ’ ಪತ್ರವನ್ನು ಲಿಖಿತ ರೂಪದಲ್ಲಿ ಬರೆದುಕೊಟ್ಟರೆ ಆಗ ಈ ಯೋಜನೆಯನ್ನು ಒಪ್ಪಬಹುದು.

-ಇಂದಿರಾ ಶ್ರೀಧರ್, ಮಳಲಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT