ADVERTISEMENT

ಹಿರಿಯ ನಾಗರಿಕರು ಆತ್ಮನಿರ್ಭರರಾಗಲು...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಏಪ್ರಿಲ್ 2022, 19:31 IST
Last Updated 8 ಏಪ್ರಿಲ್ 2022, 19:31 IST

ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಿಸಿರುವುದು ಸ್ವಾಗತಾರ್ಹ. ದೇಶದಲ್ಲಿ ಬಹಳಷ್ಟು ಹಿರಿಯ ನಾಗರಿಕರು ಸಾರ್ವಜನಿಕ, ಖಾಸಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ್ದು, ಪಿಂಚಣಿಗೆ ಅರ್ಹರಾಗಿಲ್ಲ. ಅವರು ತಮ್ಮ ಜೀವನಕ್ಕೆ ಅಂಚೆಕಚೇರಿ, ಬ್ಯಾಂಕ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಹಿರಿಯ ನಾಗರಿಕರ ಠೇವಣಿಯ ಬಡ್ಡಿಯನ್ನು ನಂಬಿದ್ದಾರೆ.

ಆರೋಗ್ಯ ಸೇವೆ ಒಳಗೊಂಡು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಣದುಬ್ಬರದ ಕಾಲಘಟ್ಟದಲ್ಲಿ, ಈ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿದರೆ, ಇಳಿ ವಯಸ್ಸಿನಲ್ಲಿ ಬಹುತೇಕ ಹಿರಿಯ ನಾಗರಿಕರು ಆತ್ಮನಿರ್ಭರರಾಗಿ ಗೌರವಾನ್ವಿತ ಬದುಕು ಸಾಗಿಸಲು ಅನುಕೂಲವಾಗುತ್ತದೆ.

- ದೀಪಾ ಶ್ರೀವತ್ಸ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.