‘ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ’ ಎಂದು ರಾಜಕಾರಣಿಯೊಬ್ಬರು ಹೇಳಿದ್ದಾರೆ. ಸುಮಲತಾ ಹಿರಿಯ ಕಲಾವಿದ ದಿವಂಗತ ಅಂಬರೀಷ್ ಅವರ ಪತ್ನಿ. ಅವರು ಮಂಡ್ಯದ ಗೌಡ್ತಿ ಅಲ್ಲ ಎನ್ನುವ ಒಂದೇ ಕಾರಣವನ್ನು ಮುಂದಿಟ್ಟು, ಚುನಾವಣೆಗೆ ಸ್ಪರ್ಧಿಸುವುದನ್ನು ವಿರೋಧಿಸುವುದು ಸರಿಯಲ್ಲ.
ಜಾತಿ ರಾಜಕಾರಣ ಮುಖ್ಯವಾಗಿರುವ ಈ ದಿನಮಾನದಲ್ಲಿ ನೀತಿ ರಾಜಕೀಯಕ್ಕೆ ಮೇಲ್ಪಂಕ್ತಿ ಹಾಕುವ ಅವಕಾಶವನ್ನು ಜನ ಕಳೆದುಕೊಳ್ಳಬಾರದು. ರಾಜಕಾರಣಿಗಳ ಮೂಲ ಎಲ್ಲಾದರೂ ಇರಲಿ ಜನರಿಗೆ ಬೇಕಾಗಿರುವುದು ಸಾಮಾಜಿಕ ಕಳಕಳಿಯುಳ್ಳ ಜನಪ್ರತಿನಿಧಿ ಅಷ್ಟೆ.
–ವೆಂಕಟರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.