ADVERTISEMENT

'ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ': ನೀತಿ ರಾಜಕೀಯ ಮೇಲಾಗಲಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 4:49 IST
Last Updated 6 ಫೆಬ್ರುವರಿ 2019, 4:49 IST
   

‘ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ’ ಎಂದು ರಾಜಕಾರಣಿಯೊಬ್ಬರು ಹೇಳಿದ್ದಾರೆ. ಸುಮಲತಾ ಹಿರಿಯ ಕಲಾವಿದ ದಿವಂಗತ ಅಂಬರೀಷ್‌ ಅವರ ಪತ್ನಿ. ಅವರು ಮಂಡ್ಯದ ಗೌಡ್ತಿ ಅಲ್ಲ ಎನ್ನುವ ಒಂದೇ ಕಾರಣವನ್ನು ಮುಂದಿಟ್ಟು, ಚುನಾವಣೆಗೆ ಸ್ಪರ್ಧಿಸುವುದನ್ನು ವಿರೋಧಿಸುವುದು ಸರಿಯಲ್ಲ.

ಜಾತಿ ರಾಜಕಾರಣ ಮುಖ್ಯವಾಗಿರುವ ಈ ದಿನಮಾನದಲ್ಲಿ ನೀತಿ ರಾಜಕೀಯಕ್ಕೆ ಮೇಲ್ಪಂಕ್ತಿ ಹಾಕುವ ಅವಕಾಶವನ್ನು ಜನ ಕಳೆದುಕೊಳ್ಳಬಾರದು. ರಾಜಕಾರಣಿಗಳ ಮೂಲ ಎಲ್ಲಾದರೂ ಇರಲಿ ಜನರಿಗೆ ಬೇಕಾಗಿರುವುದು ಸಾಮಾಜಿಕ ಕಳಕಳಿಯುಳ್ಳ ಜನಪ್ರತಿನಿಧಿ ಅಷ್ಟೆ.

–ವೆಂಕಟರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.