ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ವಿಧಾನಪರಿಷತ್ತಿನ ಕೆಲವು ಸದಸ್ಯರು ಆಗ್ರಹಿಸಿರುವುದು (ಪ್ರ.ವಾ., ಆ. 2) ಸರಿಯಷ್ಟೆ. ಕಾಯ್ದೆ ಜಾರಿಯಾಗುವುದಕ್ಕೆ ಮೊದಲು, ಮಸೂದೆಯು ವಿಧಾನಮಂಡಲದ ಉಭಯ ಸದನಗಳಲ್ಲೂ ಚರ್ಚೆಗೆ ಒಳಪಟ್ಟಿರುತ್ತದೆ. ಆಗ ಇವರೆಲ್ಲ ಇದೇ ಸಲಹೆಗಳನ್ನು ನೀಡಿ ಸರಿಪಡಿಸಲು ಮುಂದಾಗದೆ, ಈಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಜಾಣತನದಿಂದ ಮಾತನಾಡಿರುವುದು ಹಾಸ್ಯಾಸ್ಪದ ಎನಿಸುತ್ತದೆ.
ಮೂರೂವರೆ ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಈಗಷ್ಟೇ ಚಾಲನೆ ದೊರೆತಿದೆ. ಕಾಯ್ದೆಯಲ್ಲಿ ಆದ್ಯತಾ ಪ್ರಕರಣ, ಸೇವಾ ಜ್ಯೇಷ್ಠತೆ ಅನುಸರಿಸಲು ರೂಪಿಸಿರುವ ನಿಯಮಗಳು ಸಹ ಗೊಂದಲದಿಂದ ಕೂಡಿವೆ. ಇದರಿಂದ, ಸೇವೆಯಲ್ಲಿ ಹಿರಿತನವಿರುವ ಸಾವಿರಾರು ಶಿಕ್ಷಕರಿಗೆ ಹಿನ್ನಡೆಯಾಗಿದೆ. ವಸ್ತುಸ್ಥಿತಿ ಹೀಗಿರುವಾಗ, ಕಡ್ಡಾಯ ವರ್ಗಾವಣೆ ಸಮಸ್ಯೆ ಮಾತ್ರ ವಿಧಾನಪರಿಷತ್ ಸದಸ್ಯರಿಗೆ ಎದ್ದು ಕಾಣುವುದು ದುರದೃಷ್ಟಕರ.
-ಪುಟ್ಟದಾಸು, ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.