ADVERTISEMENT

ತಜ್ಞರ ಚಾವಡಿಯಲ್ಲಿ ಶಾಸಕರೇಕೆ?

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:45 IST
Last Updated 11 ಮೇ 2021, 19:45 IST

ಯಾವುದೇ ವಿಶ್ವವಿದ್ಯಾಲಯದಲ್ಲಿ ಅಕಡೆಮಿಕ್ ಕೌನ್ಸಿಲ್ ಎಂಬುದು ಶೈಕ್ಷಣಿಕ ವಿಷಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ, ಚಿಂತನೆ ನಡೆಸುವ, ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ತಜ್ಞರ ಚಾವಡಿಯಾಗಿರುತ್ತದೆ. ಸಾಮಾನ್ಯವಾಗಿ ಅಕಡೆಮಿಕ್ ವಲಯದವರೇ ಇದರ ಸದಸ್ಯರಾಗಿರುತ್ತಾರೆ. ಆದರೆ ಈಗ ರಾಜ್ಯ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯದ ಅಕಡೆಮಿಕ್ ಕೌನ್ಸಿಲ್‌ಗೆ ಮೂವರು ಶಾಸಕರನ್ನು ಸದಸ್ಯರನ್ನಾಗಿ ನೇಮಿಸಿದೆ (ಪ್ರ.ವಾ., ಮೇ 7).

ಶಾಸಕರೆಂದ ಮೇಲೆ ಅವರು ಎಲ್ಲಾ ಸಮಿತಿಗಳಲ್ಲಿ ಸಂಬಂಧವಿರಲಿ ಇಲ್ಲದಿರಲಿ ಇರಲೇಬೇಕೆ? ನಾಡಿನ ತುಂಬ ಇರುವ ಪ್ರಾಧ್ಯಾಪಕರು, ಶಿಕ್ಷಣ ತಜ್ಞರ ನೆನಪು ಸರ್ಕಾರಕ್ಕೆ ಬರಲಿಲ್ಲವೇ? ಈ ನೇಮಕಾತಿ ಮಾಡಿರುವುದು ಶಾಸಕರನ್ನು ಓಲೈಸಲೋ ಅಥವಾ ರಾಜಕೀಯ ಕ್ಷೇತ್ರದವರು ವಿಶ್ವವಿದ್ಯಾಲಯದ ನಡೆಯಲ್ಲಿ ಮೂಗು ತೂರಿಸಲಿ ಎಂಬ ದುರುದ್ದೇಶದಿಂದಲೋ ಎಂಬುದು ಅರ್ಥವಾಗುತ್ತಿಲ್ಲ.

-ಪ್ರೊ. ಎಂ.ಎಸ್.ರಘುನಾಥ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.