ADVERTISEMENT

ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯವೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜನವರಿ 2021, 19:31 IST
Last Updated 10 ಜನವರಿ 2021, 19:31 IST

ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಸಾವಿರಾರು ಮಕ್ಕಳು ಬರುತ್ತಾರೆ. ಆದರೆ, ಮೂಲೆಯ ಎಷ್ಟೋ ಹಳ್ಳಿಗಳಿಗೆ ಬಸ್ ಸೌಲಭ್ಯ ಇಲ್ಲದಿರುವುದು ಒಂದು ಸಮಸ್ಯೆ. ಇನ್ನು ಕೆಲವು ಮಕ್ಕಳದು ಇನ್ನೊಂದು ಬಗೆಯ ಸಮಸ್ಯೆ. ಅದೆಂದರೆ, ವಿದ್ಯಾರ್ಥಿಗಳಿಗೆ ಸರ್ಕಾರ ಬಸ್‌ಪಾಸ್ ಸೌಲಭ್ಯ ಕಲ್ಪಿಸಿದ್ದರೂ ಅವರನ್ನು ಬಸ್‌ಗಳಲ್ಲಿ ಕರೆದೊಯ್ಯಲು ನಿರ್ವಾಹಕ ಹಾಗೂ ಚಾಲಕರು ಎಲ್ಲಿಲ್ಲದ ನಿರ್ಲಕ್ಷ್ಯ ತೋರುತ್ತಾರೆ. ವಿದ್ಯಾರ್ಥಿಗಳ ಬಗ್ಗೆ ಇಂತಹ ನಿರ್ಲಕ್ಷ್ಯ ಏಕೆ? ಸಾರಿಗೆ ಸಚಿವರು ಇದನ್ನು ಗಮನಿಸಿ ಪರಿಹಾರ ಒದಗಿಸಬೇಕು. ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುವು ಮಾಡಿಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ಸಹಕರಿಸುವ ಮನೋಭಾವವನ್ನು ಚಾಲಕ, ನಿರ್ವಾಹಕರಿಗೆ ಸಾರಿಗೆ ಸಂಸ್ಥೆ ಮನವರಿಕೆ ಮಾಡಿಕೊಡಬೇಕು.

– ಸುನೀಲ್ ಪಾಟೀಲ್,ನಾಗೇಶನಹಳ್ಳಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT