
ಗರ್ಭಿಣಿ
ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ 'ಪ್ರಸೂತಿ ಆರೈಕೆ' ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬಿಪಿಎಲ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಗರ್ಭಿಣಿಯರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಸಾಮಾನ್ಯ ವರ್ಗದ ಮಹಿಳೆಯರಿಗೆ ₹2,000 ಹಾಗೂ ಎಸ್ಸಿ, ಎಸ್ಟಿ ವರ್ಗದ ಮಹಿಳೆಯರಿಗೆ ₹3000 ನೀಡಲಾಗುತ್ತದೆ.
ಕರ್ನಾಟಕ ‘ಪ್ರಸೂತಿ ಆರೈಕೆ‘ ಯೋಜನೆಯು 2007ರಲ್ಲಿ ಜಾರಿಗೆ ಬಂದಿದೆ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಯೋಜನೆಯ ನೋಡಲ್ ಇಲಾಖೆಯಾಗಿದೆ.ಇದು ಶೇ 100 ಕರ್ನಾಟಕ ಸರ್ಕಾರದ ಅನುದಾನಿತ ಯೋಜನೆಯಾಗಿದೆ.
ಫಲಾನುಭವಿಗಳಿಗೆ ಎರಡು ಹಂತದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.
ಮೊದಲ ಕಂತು: ಫಲಾನುಭವಿಗಳಿಗೆ ಗರ್ಭಧಾರಣೆಯ 2ನೇ ತ್ರೈಮಾಸಿಕದ ಅವಧಿಯಲ್ಲಿ (13-28 ವಾರ) ನೀಡಲಾಗುತ್ತದೆ.
2ನೇ ಕಂತು: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನೀಡಲಾಗುತ್ತದೆ.
ಸಹಾಯಧನದ ಮೊತ್ತ
ಸಾಮಾನ್ಯ ವರ್ಗದ ಮಹಿಳೆಯರಿಗೆ ₹2,000
ಎಸ್ಸಿ, ಎಸ್ಟಿ ವರ್ಗದ ಮಹಿಳೆಯರಿಗೆ ₹3000 ನೀಡಲಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಮಹಿಳೆಯರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರು.
ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ಮಹಿಳೆಯರು.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರು
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು
ವಾಸಸ್ಥಳ ಪ್ರಮಾಣ ಪತ್ರ
ಬಿಪಿಎಲ್ ಕಾರ್ಡ್
ಎಎನ್ಸಿ ನೊಂದಣಿ ನಂಬರ್/ ತಾಯಿ ಕಾರ್ಡ್
ಮೊಬೈಲ್ ನಂಬರ್
ಬ್ಯಾಂಕ್ ಅಕೌಂಟ್ ನಂಬರ್.
ಜಾತಿ ಪ್ರಮಾಣ ಪತ್ರ.
ಆಧಾರ್ ಕಾರ್ಡ್.
ಗರ್ಭಿಣಿಯರು ತಮ್ಮ ಭಾಗದ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು
ಅವರು(ಆಶಾ ಕಾರ್ಯಕರ್ತೆ) ಕರ್ನಾಟಕ ಪ್ರಸೂತಿ ಆರೈಕೆ ಯೋಜನೆ ಅಡಿ ನೊಂದಾಯಿಸುತ್ತಾರೆ ಮತ್ತು ಅಗತ್ಯ ತಪಾಸಣೆಗೆ ಸಹಾಯ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.