ಬೆಂಗಳೂರು: ಪ್ರಮುಖ ರೈಡರ್ ರೋಹಿತ್ ಕುಮಾರ್ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜುಲೈ 28ರಿಂದ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಡಿಫೆಂಡರ್ ರವಿಂದರ್ ಪಹಾಲ್ ಬುಲ್ಸ್ ತಂಡದ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.
ನಾಲ್ಕನೇ ಆವೃತ್ತಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಬುಲ್ಸ್ ತಂಡ ಈ ಬಾರಿ ಪ್ರಶಸ್ತಿ ಗೆದ್ದುಕೊಳ್ಳುವ ಉದ್ದೇಶ ಹೊಂದಿದೆ. ಭಾನುವಾರ ಬುಲ್ಸ್ ತಂಡವನ್ನು ಪ್ರಕಟಿಸಲಾಗಿದೆ.
ತಂಡ ಇಂತಿದೆ: ರೋಹಿತ್ ಕುಮಾರ್ (ನಾಯಕ), ರವಿಂದರ್ ಪಹಾಲ್ (ಉಪ ನಾಯಕ), ಹರೀಶ್ ನಾಯಕ್, ರೋಹಿತ್, ಗುರ್ವಿಂದರ್ ಸಿಂಗ್, ಅಂಕಿತ್ ಸಂಗ್ವಾನ್, ಮಹೇಂದರ್ ಸಿಂಗ್, ಪ್ರೀತಮ್ ಚಿಲ್ಲಾರ್, ಅಮಿತ್, ಆಶಿಶ್ ಕುಮಾರ್, ಸಚಿನ್ ಕುಮಾರ್, ಅಮಿತ್ ಶೆರನ್, ಸಿನೊತರಣ್ ಕನ್ನೇಶರಾಜ, ಪ್ರದೀಪ್, ಅಜಯಕುಮಾರ್, ಸುನಿಲ್, ಸುಮಿತ್, ಅಂಜಯ್, ಕುಲ್ದೀಪ್ ಸಿಂಗ್.
ಯುವ ತಂಡಕ್ಕೆ ಅಂತರರಾಷ್ಟ್ರೀಯ ಮಾಜಿ ಆಟಗಾರ ರಣಬೀರ್ ಸಿಂಗ್ ಸಲಹೆಗಾರರಾಗಿದ್ದಾರೆ. ಬುಲ್ಸ್ ತಂಡ ನೂತನ ಪೋಷಾಕಿನೊಂದಿಗೆ ಆಡಲಿದೆ.
‘ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಳಿತ ಮಂಡಳಿ ನೀಡಿರುವ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಶ್ರಮಿಸಲಿದ್ದೇನೆ’ ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.