ADVERTISEMENT

ಏಷ್ಯಾಕಪ್‌ನಲ್ಲಿ ಭಾರತ–ಪಾಕ್ ಪಂದ್ಯ: ಆದಿತ್ಯ ಠಾಕ್ರೆ ವಿರೋಧ

ಪಿಟಿಐ
Published 15 ಆಗಸ್ಟ್ 2025, 15:39 IST
Last Updated 15 ಆಗಸ್ಟ್ 2025, 15:39 IST
 ಆದಿತ್ಯ ಠಾಕ್ರೆ
 ಆದಿತ್ಯ ಠಾಕ್ರೆ   

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಹಣದಾಸೆಗಾಗಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯವನ್ನು ಬಹಿಷ್ಕರಿಸುತ್ತಿಲ್ಲ. ದೇಶಕ್ಕಾಗಿ ಸೇನೆಯು ಮಾಡಿದ ಬಲಿದಾನಕ್ಕಿಂತ ಕ್ರಿಕೆಟ್ ಮಂಡಳಿಯ ಹಣದಾಸೆಯೇ ಪ್ರಧಾನವಾಗಿದೆ ಎಂದು ಶಿವಸೇನಾದ ಧುರೀನ ಆದಿತ್ಯ ಠಾಕ್ರೆ ಕಿಡಿಕಾರಿದ್ದಾರೆ. 

‘ಭಾರತ ಮತ್ತು ಪಾಕ್‌ ನಡುವೆ ರಕ್ತ ಹಾಗೂ ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲವೆಂದು ಸ್ವಾತಂತ್ರ್ಯೊತ್ಸವ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಪ್ರಚೋದನೆಯಿದೆ ಎಂದು ಜಗತ್ತಿನ ಎದುರು ಸಾಬೀತುಪಡಿಸಲು  ಕೇಂದ್ರ ಸರ್ಕಾರ ಮತ್ತು ದೇಶವು ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ ಬಿಸಿಸಿಐ ಧೋರಣೆ ದೇಶವಿರೋಧಿಯಾಗಿದೆ’ ಎಂದು  ಆದಿತ್ಯ ಹೇಳಿದರು. 

‘ಏಷ್ಯಾ ಕಪ್ ಟೂರ್ನಿಯ ನಿಯಮಗಳಿಗೆ ತಾವು ಬದ್ಧರಾಗಿರುವುದಾಗಿ ಬಿಸಿಸಿಐ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.  ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ನಲ್ಲಿ ಬಿಸಿಸಿಐಗೆ ಇರುವ ಪ್ರಾಬಲ್ಯ ಎಲ್ಲರಿಗೂ ಗೊತ್ತಿದೆ’ ಎಂದು ಆದಿತ್ಯ ವ್ಯಂಗ್ಯವಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.