ನವದೆಹಲಿ:ರಣಜಿ ಟ್ರೋಫಿ ಚಾಂಪಿಯನ್ ವಿದರ್ಭ ಎದುರಿನ ಇರಾನಿ ಕಪ್ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುವರು. ಇದೇ ತಿಂಗಳ 12ರಿಂದ ನಾಗಪುರದಲ್ಲಿ ಐದು ದಿನಗಳ ಪಂದ್ಯ ನಡೆಯಲಿದೆ.
ಕರ್ನಾಟಕದ ಕೆ.ಎಲ್.ರಾಹುಲ್, 13ರಿಂದ ವಯನಾಡ್ನಲ್ಲಿ ನಡೆ ಯಲಿರುವ ಇಂಗ್ಲೆಂಡ್ ‘ಎ’ ಎದುರಿನ ’ಟೆಸ್ಟ್’ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ಮುನ್ನಡೆಸುವರು.
ತಂಡಗಳು: ಭಾರತ ಇತರೆ: ಅಜಿಂಕ್ಯ ರಹಾನೆ (ನಾಯಕ), ಮಯಂಕ್ ಅಗರವಾಲ್, ಅನ್ಮೋಲ್ ಪ್ರೀತ್ ಸಿಂಗ್, ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆ.ಗೌತಮ್, ಧರ್ಮೇಂದ್ರ ಸಿಂಹ ಜಡೇಜ, ರಾಹುಲ್ ಚಾಹರ್, ಅಂಕಿತ್ ರಜಪೂತ್, ತನ್ವೀರ್ ಉಲ್ ಹಕ್, ರೋನಿತ್ ಮೋರೆ, ಸಂದೀಪ್ ವಾರಿಯರ್, ರಿಂಕು ಸಿಂಗ್, ಸ್ನೆಲ್ ಪಟೇಲ್.
ಭಾರತ ‘ಎ’: ಕೆ.ಎಲ್.ರಾಹುಲ್ (ನಾಯಕ), ಎ.ಆರ್.ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕಿತ್ ಭಾವ್ನೆ, ಕರುಣ್ ನಾಯರ್, ರಿಕ್ಕಿ ಭುಯಿ, ಸಿದ್ದೇಶ್ ಲಾಡ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ಶಹಬಾಜ್ ನದೀಮ್, ಜಲಜ್ ಸಕ್ಸೇನ, ಮಯಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವರುಣ್ ಆ್ಯರನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.