ADVERTISEMENT

ಕೆಎಸ್‌ಸಿಎ: ಟಿ–20 ಪಂದ್ಯ ಪರಿವೀಕ್ಷಕರಾಗಿ ಅವಿನಾಶ ‍ಪೋತದಾರ ನೇಮಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 15:26 IST
Last Updated 27 ಸೆಪ್ಟೆಂಬರ್ 2022, 15:26 IST
ಅವಿನಾಶ ‍ಪೋತದಾರ
ಅವಿನಾಶ ‍ಪೋತದಾರ   

ಬೆಳಗಾವಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯ ಧಾರವಾಡ ವಲಯದ ಸಂಚಾಲಕ ಅವಿನಾಶ ‍ಪೋತದಾರ ಅವರನ್ನು ಇಂಡಿಯಾ– ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ–20 ಪಂದ್ಯಗಳ ಪರಿವೀಕ್ಷಕರಾಗಿ ನೇಮಕ ಮಾಡಲಾಗಿದೆ.

ಬೆಳಗಾವಿಯವರಾದ ಅವಿನಾಶ ಪೋತದಾರ ಹಲವು ವರ್ಷಗಳಿಂದ ಕೆಎಸ್‌ಸಿಎದಲ್ಲಿ ಕ್ರಿಯಾಶೀಲರಾಗಿದ್ದಾರೆ. ಇದನ್ನು ಪರಿಗಣಿಸಿ ಬಿಸಿಸಿಐ ಈ ಮಹತ್ವದ ಜವಾದ್ಬಾರಿ ವಹಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆ. 28ರಿಂದ ತಿರುವನಂತಪುರಂನಲ್ಲಿ ನಡೆಯಲಿರುವ ಚೊಚ್ಚಲ ಟಿ–20 ಪಂದ್ಯದಲ್ಲಿ ಅವಿನಾಶ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.