ADVERTISEMENT

ಎನ್‌ಸಿಎಗೆ ದ್ರಾವಿಡ್ ಖಚಿತ

ಪಿಟಿಐ
Published 8 ಜುಲೈ 2019, 20:02 IST
Last Updated 8 ಜುಲೈ 2019, 20:02 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರ ಸ್ಥಾನಕ್ಕೆ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ನೇಮಕ ಖಚಿತವಾಗಿದೆ.

ಹೋದ ತಿಂಗಳು ಅವರನ್ನು ನೇಮಕ ಮಾಡಿದ್ದನ್ನು ಬಿಸಿಸಿಐ ಪ್ರಕಟಿಸಿತ್ತು. ಅವರು ಜುಲೈ 1ರಂದು ಅಧಿಕಾರ ಸ್ವೀಕರಿಸಬೇಕಿತ್ತು. ಅದರೆ, ಇಂಡಿಯಾ ಸಿಮೆಂಟ್ಸ್‌ ಕಂಪನಿಯಲ್ಲಿ ಅವರು ಉಪಾಧ್ಯಕ್ಷ ಸ್ಥಾನ ಹೊಂದಿದ್ದಾರೆ. ಆದ್ದರಿಂದ ಎನ್‌ಸಿಎಗೆ ಮುಖಸ್ಥರಾಗುವುದು ಹಿತಾಸಕ್ತಿ ಸಂಘರ್ಷ ತಡೆ ನಿಯಮದ ಉಲ್ಲಂಘನೆಯಾಗಲಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ ದೂರು ನೀಡಿದ್ದರು. ಆದರೆ ಈಗ ಎನ್‌ಸಿಎ ಅಧಿಕಾರದ ಅವಧಿ ಮುಗಿಯುವವರೆಗೂ ದ್ರಾವಿಡ್ ಅವರಿಗೆ ರಜೆ ಮಂಜೂರು ಮಾಡಿರುವುದಾಗಿ ಇಂಡಿಯಾ ಸಿಮೆಂಟ್ಸ್‌ ಪ್ರಕಟಿಸಿದೆ.

‘ದ್ರಾವಿಡ್ ಅವರು ಎನ್‌ಸಿಎ ಮುಖ್ಯಸ್ಥರಾಗಲಿದ್ದಾರೆ. ಅವರು ಯುವ ಆಟಗಾರರ ತರಬೇತಿ, ಪುನಶ್ಚೇತನ, ಕೋಚ್‌, ನೆರವು ಸಿಬ್ಬಂದಿಗಳಿಗೆ ತರಬೇತಿ ಮತ್ತಿತರ ಕಾರ್ಯಗಳನ್ನು ನಿಭಾಯಿಸುವರು. ರಾಷ್ಟ್ರೀಯ ಪುರುಷ ಮತ್ತು ಮಹಿಳಾ ತಂಡಗಳಿಗೂ ಅವರು ನೆರವಾಗಲಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.