ADVERTISEMENT

ಕ್ರಿಕೆಟ್‌: ಎಎಸ್‌ಸಿ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:30 IST
Last Updated 14 ಮಾರ್ಚ್ 2020, 19:30 IST
ಪ್ರಶಸ್ತಿ ಜಯಿಸಿದ ಎಎಸ್‌ಸಿ ತಂಡ
ಪ್ರಶಸ್ತಿ ಜಯಿಸಿದ ಎಎಸ್‌ಸಿ ತಂಡ   

ಬೆಂಗಳೂರು: ವಿಕಾಸ್‌ ಮೋಹನ್‌ ಅವರ ಉತ್ತಮ ಬ್ಯಾಟಿಂಗ್‌ (ಔಟಾಗದೆ 44) ನೆರವಿನಿಂದ ಎಎಸ್‌ಸಿ ಕೇಂದ್ರ ತಂಡವು ಭಾಗೀರಥಿ ಗ್ರೂಪ್‌ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಕೆಎಸ್‌ಸಿಎ ಎರಡನೇ ಗುಂಪು, ಎರಡನೇ ಡಿವಿಷನ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾಗೀರಥಿ ತಂಡ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 163 ರನ್‌ ಗಳಿಸಿತು.

ಎಎಸ್‌ಸಿ ತಂಡ 17.4 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಭಾಗೀರಥಿ ಗ್ರೂಪ್‌ ತಂಡ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 163 (ಪ್ರಜ್ವಲ್‌ 38, ಆದರ್ಶ್‌ ಪ್ರಜ್ವಲ್‌ 31; ಇರ್ಫಾನ್‌ ಖಾನ್‌ 30ಕ್ಕೆ2, ಪ್ರೇಮ್‌ ಕುಮಾರ್‌ 16ಕ್ಕೆ 2, ಆಶಿಶ್‌ 15ಕ್ಕೆ 2).

ಎಎಸ್‌ಸಿ ಕೇಂದ್ರ ತಂಡ: 17.4 ಓವರ್‌ಗಳಲ್ಲಿ 6 ವಿಕೆಟ್‌ಗೆ 166 (ವಿಕಾಸ್‌ ಮೋಹನ್‌ ಔಟಾಗದೆ 44, ರಿತೇಶ್‌ ನೇಗಿ 34, ಸಂಜಯ್‌ ಯಾದವ್‌ 28, ಅಭಿಷೇಕ್‌ ಸಿನ್ಹಾ 25; ಶಾನ್‌ ತ್ರಿಸ್ತನ್‌ ಜೋಸೆಫ್‌ 30ಕ್ಕೆ 3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.