ADVERTISEMENT

ಕ್ರಿಕೆಟ್: ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ, ಶಿವಮೊಗ್ಗದ ಜೆ.ಸಂದೀಪ್ BCCI ಅಂಪೈರ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 13:22 IST
Last Updated 6 ಜುಲೈ 2025, 13:22 IST
<div class="paragraphs"><p>ಜೆ.ಸಂದೀಪ್, ಶ್ರೀನಾಥ ಕುಲಕರ್ಣಿ</p></div>

ಜೆ.ಸಂದೀಪ್, ಶ್ರೀನಾಥ ಕುಲಕರ್ಣಿ

   

ಬೆಂಗಳೂರು: ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ ಮತ್ತು ಶಿವಮೊಗ್ಗದ ಜೆ. ಸಂದೀಪ್  ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಪೈರ್ ಆಗಿ ಅರ್ಹತೆ ಗಳಿಸಿದ್ದಾರೆ.

ಈಚೆಗೆ ಅಹಮದಾಬಾದಿನಲ್ಲಿ ನಡೆದಿದ್ದ  ಬಿಸಿಸಿಐ ಅಂಪೈರಿಂಗ್ ಪರೀಕ್ಷೆಯಲ್ಲಿ ಶ್ರೀನಾಥ ಮತ್ತು ಸಂದೀಪ್ ಅವರು ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಒಟ್ಟು 26 ಮಂದಿ ಪಾಸಾಗಿದ್ದಾರೆ. 

ADVERTISEMENT

ಬಿಸಿಸಿಐ ಟೂರ್ನಿಗಳ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೆ ಲಭಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.