ADVERTISEMENT

ತಂಡದ ಆಯ್ಕೆ ಪ್ರಾಮಾಣಿಕವಾಗಿತ್ತು: ಮಾಹೇಲ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:15 IST
Last Updated 12 ಮೇ 2019, 20:15 IST
ನಾಯಕ ರೋಹಿತ್ ಶರ್ಮಾ (ಎಡ) ಅವರೊಂದಿಗೆ ಮಾಹೇಲ ಜಯವರ್ಧನೆ
ನಾಯಕ ರೋಹಿತ್ ಶರ್ಮಾ (ಎಡ) ಅವರೊಂದಿಗೆ ಮಾಹೇಲ ಜಯವರ್ಧನೆ   

ಹೈದರಾಬಾದ್ (ಪಿಟಿಐ): ವಿವಿಧ ಟೂರ್ನಿಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಆಟಗಾರರು ಇದ್ದದ್ದು ಮತ್ತು ಪ್ರಾಮಾಣಿಕವಾಗಿ ತಂಡವನ್ನು ಆಯ್ಕೆ ಮಾಡುತ್ತಿದ್ದದ್ದು ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕಾರಣ ಎಂದು ಕೋಚ್ ಮಾಹೇಲ ಜಯವರ್ಧನೆ ಅಭಿಪ್ರಾಯಪಟ್ಟರು.

‘ತಂಡದಲ್ಲಿ ಯಶಸ್ಸಿನ ‘ಸಂಸ್ಕೃತಿ’ಯನ್ನು ಬೆಳೆಸಲು ಆಡಳಿತ ತುಂಬ ಶ್ರಮ ವಹಿಸಿದೆ. ತಂಡದಲ್ಲಿ ಎಲ್ಲರೂ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಇದರಿಂದ ಪಂದ್ಯಗಳಲ್ಲಿ ತಂತ್ರಗಳನ್ನು ಹೂಡುವ ಸಂದರ್ಭದಲ್ಲಿ ಎದುರಾಳಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಈ ಅಂಶ ಟೂರ್ನಿಯುದ್ದಕ್ಕೂ ತಂಡಕ್ಕೆ ಸಹಕಾರಿಯಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT